ವಿಜಯಾನಂದ ಕಾಶಪ್ಪನವರಿಗೆ DCM ಸ್ಥಾನ ನೀಡಿ

ಶುಕ್ರವಾರ, 19 ಮೇ 2023 (13:31 IST)
ಪಂಚಮಸಾಲಿ ಮುಖಂಡ ವಿಜಯಾನಂದ ಕಾಶಪ್ಪನವರಿಗೆ ಡಿಸಿಎಂ ಸ್ಥಾನ ನೀಡಬೇಕೆಂದು ಆಗ್ರಹಿಸಿದ್ದಾರೆ.ಗದಗನಲ್ಲಿ ಪಂಚಮಸಾಲಿ ಸಮುದಾಯದ ಮುಖಂಡ ಕೊಟ್ರಗೌಡ ಪಾಟೀಲ ಸುದ್ದಿಗೋಷ್ಠಿ ನಡಸಿ, ಪಂಚಮಸಾಲಿ ಸಮುದಾಯಕ್ಕೆ ಡಿಸಿಎಂ ಸ್ಥಾನ ನೀಡವಂತೆ ಒತ್ತಾಯಿಸಿದ್ದಾರೆ.. ಕಳೆದ ಎರಡುವರೆ ವರ್ಷ ವಿಜಯಾನಂದ ಕಾಶಪ್ಪನವರ್​​​​ 2ಎ ಮೀಸಲಾತಿ ಹೋರಾಟ‌ ನಡೆಸಿದ್ದಾರೆ.ಅವರ ಹೋರಾಟದ ಫಲವಾಗಿ ಕಾಂಗ್ರೆಸ್ ಉತ್ತರ ಕರ್ನಾಟಕದಲ್ಲಿ ಹೆಚ್ಚು ಸ್ಥಾನಗಳನ್ನು ಪಡೆದಿದೆ.. ಪಂಚಮಸಾಲಿ ಸಮುದಾಯಕ್ಕೆ ಡಿಸಿಎಂ ಹಾಗೂ 4-5 ಸಚಿವ ಸ್ಥಾನಗಳನ್ನು ನೀಡಲು ಮನವಿ ಮಾಡಿಕೊಂಡಿದ್ದಾರೆ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ