ಬಸ್, ಲಾರಿ ಸಂಚಾರಕ್ಕಿಲ್ಲ ಗ್ರೀನ್​ ಸಿಗ್ನಲ್

ಬುಧವಾರ, 12 ಏಪ್ರಿಲ್ 2023 (14:31 IST)
ರಾಜ್ಯದ 18 ಜಿಲ್ಲೆಗೆ ಸಂಪರ್ಕ ಕಲ್ಪಿಸುವ ಪೀಣ್ಯ ಫ್ಲೈ ಓವರ್​ನಲ್ಲಿ ಬಸ್ ಮತ್ತು ಲಾರಿ ಸಂಚಾರಕ್ಕೆ ಗ್ರೀನ್​ ಸಿಗ್ನಲ್ ಸಿಕ್ಕಿಲ್ಲ.. ಭಾರತೀಯ ವಿಜ್ಞಾನ ಸಂಸ್ಥೆಯು ಮೇಲ್ಸೇತುವೆ ಗುಣಮಟ್ಟದ ಬಗ್ಗೆ ವರದಿ ನೀಡಿದೆ.. ಪಿಲ್ಲರ್​​ಗಳ ನಡುವೆ ಅಳವಡಿಸಿರುವ ಕೇಬಲ್​ಗಳನ್ನು ಬದಲಿಸಿ, ಇನ್ನಷ್ಟು ಹೆಚ್ಚುವರಿ ಕೇಬಲ್​ಗಳನ್ನು ಅಳವಡಿಕೆ ಮಾಡುವಂತೆ ಭಾರತೀಯ ವಿಜ್ಞಾನ ಸಂಸ್ಥೆ ಸೂಚನೆಯನ್ನು ನೀಡಿದೆ.. ಹೀಗಾಗಿ ಇನ್ನಷ್ಟು ದಿನ ಈ ಮೇಲ್ಸೇತುವೆ ಮೇಲಿನ ಭಾರೀ ವಾಹನಗಳ ಓಡಾಟಕ್ಕೆ ಬ್ರೇಕ್ ಬಿದ್ದಿದೆ.. ಗೊರಗುಂಟೆಪಾಳ್ಯದಿಂದ ನಾಗಸಂದ್ರದ ಪಾರ್ಲೆ ಜಿ ಫ್ಯಾಕ್ಟರಿವರೆಗೂ 5 ಕಿಲೋ ಮೀಟರ್​ ಉದ್ದ ನಿರ್ಮಿಸಿರುವ ಮೇಲ್ಸೇತುವೆ ಇದಾಗಿದೆ.. IISC ತಜ್ಞರ ಸಲಹೆಯಂತೆ ಹೆಚ್ಚುವರಿ ಕೇಬಲ್​ ಅಳವಡಿಸಲು, ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ನಿರ್ಧಾರ ಮಾಡಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ