ಅಕ್ರಮ ಆಸ್ತಿ ಸಾಬೀತಾದ್ರೆ ರೈತರಿಗೆ ಹಂಚುವೆ: ಎಚ್ ಡಿ ಕುಮಾರಸ್ವಾಮಿ

ಶುಕ್ರವಾರ, 6 ಏಪ್ರಿಲ್ 2018 (12:48 IST)
ಬೆಂಗಳೂರು: ವಿದೇಶದಲ್ಲಿ ಆಸ್ತಿ ಮಾಡಿದ್ದಾರೆಂಬ ಬಿಜೆಪಿ ಅಭ್ಯರ್ಥಿ ಸಿಪಿ ಯೋಗೇಶ್ವರ್ ಆರೋಪಕ್ಕೆ ತಿರುಗೇಟು ನೀಡಿರುವ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್ ಡಿ ಕುಮಾರಸ್ವಾಮಿ ಸಾಕ್ಷಿ ಇದ್ದರೆ ಮೋದಿಗೆ ನೀಡಲಿ ಎಂದಿದ್ದಾರೆ.

ಯೋಗೇಶ್ವರ್ ಬಳಿ ಸಾಕ್ಷ್ಯಾಧಾರವಿದ್ದರೆ ಮೋದಿಗೆ ನೀಡಲಿ. ತನಿಖೆ ನಡೆಸಿ ವಿದೇಶದಲ್ಲಿ ಆಸ್ತಿ ಇರುವುದು ಸಾಬೀತಾದರೆ ರೈತರಿಗೆ ಹಂಚುವೆ ಎಂದು ಕುಮಾರಸ್ವಾಮಿ ಹೇಳಿದ್ದಾರೆ.

ನನ್ನ ಬಗ್ಗೆ ಎರಡೂ ರಾಷ್ಟ್ರೀಯ ಪಕ್ಷಗಳು ಏನೇ ಹೇಳಿಕೊಂಡು ತಿರುಗಿದರೂ ತಲೆ ಕೆಡಿಸಿಕೊಳ್ಳಲ್ಲ. ರಾಜ್ಯದ ಜನರೇ ನನಗೆ ಭರವಸೆ ನೀಡಿದ್ದಾರೆ. ರೈತ ಸಮುದಾಯದ ಬೆಂಬಲ ನಮಗಿದೆ. ಈ ಬಾರಿ ಜೆಡಿಎಸ್ ಬಹುಮತದೊಂದಿಗೆ ಅಧಿಕಾರಕ್ಕೆ ಬರುತ್ತದೆ ಎಂದು ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ