ಕಾಂಗ್ರೆಸ್ ಗೆ ಟಾಂಗ್ ನೀಡಿದ ಹೆಚ್.ಡಿ.ಕುಮಾರಸ್ವಾಮಿ

ಮಂಗಳವಾರ, 5 ನವೆಂಬರ್ 2019 (18:51 IST)
ಉಪ ಚುನಾವಣೆ ಹತ್ತಿರವಾಗುತ್ತಿರುವಂತೆ ಕಾಂಗ್ರೆಸ್ ವಿರುದ್ಧ ಮಾಜಿ ಸಿಎಂ ವಾಗ್ದಾಳಿ ತೀವ್ರಗೊಳಿಸಿದ್ದಾರೆ.

ಕಾಂಗ್ರೆಸ್ ನಾಯಕರಿಗೆ ತಿರುಗೇಟು ನೀಡಿರೋ ಹೆಚ್.ಡಿ.ಕುಮಾರಸ್ವಾಮಿ, ಪಕ್ಕದ ಮನೆಯ ಒಲೆ ಆರಿಸೋ ಮೊದಲು ಹೊತ್ತಿ ಉರಿಯುತ್ತಿರೋ ತಮ್ಮ ಮನೆಯ ಬೆಂಕಿಯನ್ನು ನಂದಿಸಿಕೊಳ್ಳಿ ಅಂತ ಟಾಂಗ್ ನೀಡಿದ್ದಾರೆ.

ಸಿಎಂ ಆಗಲೇಬೇಕೆಂಬ ದುರಾಸೆಯಿಂದ ಕೆಲವರು ಸ್ವಾರ್ಥತೆಯಿಂದ ಜನತೆಯ ಹಣ ಪೋಲಾದರೂ ಪರವಾಗಿಲ್ಲ ಅಂತ ಸರಕಾರ ಬೀಳಿಸೋಕೆ ತುದಿಗಾಲಿನಲ್ಲಿ ನಿಂತಿದ್ದಾರೆ.

ಪಕ್ಷ ಬಿಟ್ಟು ಹೋದವರಲ್ಲಿ ಬಹುತೇಕ ಶಾಸಕರು ನಿಮ್ಮ ಪಕ್ಷದವರೇ ಎಂಬುದನ್ನು ಮರೆಯದಿರಿ ಅಂತ ಕೈ ಪಾಳೆಯದ ಮುಖಂಡರಿಗೆ ಟ್ವೀಟ್ ಮೂಲಕ ಹೆಚ್.ಡಿ.ಕುಮಾರಸ್ವಾಮಿ ತಿವಿದಿದ್ದಾರೆ.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ