ನಂಗೆ ಎಂಥಾ ಮಕ್ಕಳು ಹುಟ್ಟಿದ್ರೋ.. ಪ್ರಜ್ವಲ್, ಸೂರಜ್ ಬಗ್ಗೆ ರೇವಣ್ಣ ಆಕ್ರೋಶ

Krishnaveni K

ಗುರುವಾರ, 4 ಜುಲೈ 2024 (10:25 IST)
ಬೆಂಗಳೂರು: ಒಬ್ಬ ಮಗ ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಇನ್ನೊಬ್ಬ ಮಗ ಪುರುಷನ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿ ಜೈಲು ಪಾಲು. ಇಬ್ಬರು ಮಕ್ಕಳಿಂದಾಗಿ ಇಡೀ ಕುಟುಂಬವೇ ತಲೆತಗ್ಗಿಸುವಂತಾಗಿದ್ದಕ್ಕೆ ಎಚ್ ಡಿ ರೇವಣ್ಣ ಬೇಸರಗೊಂಡಿದ್ದಾರೆ.

ನಾನು ಮಕ್ಕಳನ್ನ ನೋಡಲು ಜೈಲಿಗೆ ಬರಲ್ಲ. ನಾನು ಜೈಲಿಗೆ ಹೋದರೆ ರೇವಣ್ಣ ಏನೋ ಹೇಳಿಕೊಡಲು ಹೋಗಿದ್ದಾರೆ ಎಂದು ಹೇಳುತ್ತಾರೆ ಎಂದಿದ್ದ ಎಚ್ ಡಿ ರೇವಣ್ಣ ಕೊನೆಗೂ ತಮ್ಮ ಮಾತು ಪಕ್ಕಕ್ಕಿಟ್ಟು ಜೈಲಿನಲ್ಲಿರುವ ಮಕ್ಕಳನ್ನು ಭೇಟಿಯಾಗಿ ಬಂದಿದ್ದರು.

ಈ ವೇಳೆ ಮಕ್ಕಳಿಗೆ ಬಟ್ಟೆ, ಹಣ್ಣು ಹಂಪಲು ನೀಡಿ ಮಾತನಾಡಿಸಿ ಬಂದಿದ್ದಾರೆ. ಆದರೆ ಮಕ್ಕಳನ್ನು ನೋಡಿ ರೇವಣ್ಣ ಸಹನೆಯ ಕಟ್ಟೆಯೊಡೆದಿದೆ. ನಂಗೆ ಎಂಥಾ ಮಕ್ಕಳು ಹುಟ್ಟಿದಿರೋ.. ನಿಮ್ಮ ಹೆಸರು ಹಾಳು ಮಾಡಿಕೊಂಡಿದ್ದಲ್ಲದೆ, ಕುಟುಂಬದ ಹೆಸರನ್ನೂ ಹಾಳು ಮಾಡಿದಿರಿ. ನಿಮ್ಮ ಭವಿಷ್ಯವೂ ಹಾಳಾಯಿತು ಎಂದು ರೇವಣ್ಣ ಪ್ರಜ್ವಲ್ ಬಳಿ ಆಕ್ರೋಶ ಹೊರಹಾಕಿದರು ಎನ್ನಲಾಗಿದೆ.

ತಂದೆಯ ಬೇಸರದ ಮಾತುಗೆ ಪ್ರಜ್ವಲ್ ಕೂಡಾ ಪ್ರತಿಕ್ರಿಯೆ ನೀಡದೇ ಸುಮ್ಮನಾಗಿದ್ದಾರಂತೆ. ಇತ್ತ ಮಾಧ್ಯಮಗಳ ಮುಂದೆಯೂ ರೇವಣ್ಣ ಮಕ್ಕಳ ಪ್ರಕರಣದ ಬಗ್ಗೆ ಹೆಚ್ಚು ಮಾತನಾಡುತ್ತಿಲ್ಲ. ಕಾಲ ಬಂದಾಗ ಎಲ್ಲದಕ್ಕೂ ಉತ್ತರ ನೀಡುತ್ತೇನೆ ಎನ್ನುತ್ತಿದ್ದಾರೆ. ಆದರೆ ಇಬ್ಬರು ಮಕ್ಕಳ ವಿರುದ್ಧವೂ ಕೇಸ್ ಬಹಳ ಸ್ಟ್ರಾಂಗ್ ಆಗಿದ್ದು ಸದ್ಯಕ್ಕಂತೂ ಇದರಿಂದ ಮುಕ್ತಿ ಸಿಗುವ ಲಕ್ಷಣ ಕಾಣುತ್ತಿಲ್ಲ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ