ನೆರೆ ಪರಿಹಾರ ಹಣದಲ್ಲಿ ಮಜಾ ಮಾಡಿದವರು ಅಂತಾ ಹೆಚ್ ಡಿಕೆ ವಾಗ್ದಾಳಿ

ಬುಧವಾರ, 5 ಜುಲೈ 2023 (15:06 IST)
ಪೆನ್ಡ್ರೈವ್ ಇಟ್ಟುಕೊಂಡು ವಿಧಾನಸೌಧಕ್ಕೆ ಹೆಚ್ ಡಿಕೆ ಆಗಮಿಸಿದ್ದು,ಓರ್ವ ಸಚಿವರ ಭ್ರಷ್ಟಾಚಾರ ವಿಚಾರವಾಗಿ ಪೆಮ್ ಡ್ರೈವ್ ಇಟ್ಟುಕೊಂಡಿದ್ದೇನೆ.ಬೇಕು ಅಂದಲ್ಲಾ ರೆಡಿ ಮಾಡಿ ಇಟ್ಟುಕೊಂಡಿದ್ದೀನಿ.ನಮ್ಮಿಂದ ಬೆಳೆದವು ನಮ್ಮ ಬಗ್ಗೆಯೇ ಮಾತಾಡ್ತಾರೆ.ವರ್ಗಾವಣೆ ದಂಧೆದೇ ಪೆನ್ ಡ್ರೈವ್.ಕೆಎಸ್ ಟಿ ಟ್ಯಾಕ್ಸ್ ನಾನು ಇಟ್ಟಿರಲಿಲ್ಲ.ತಾಜ್ ವೆಸ್ಟ್ ಎಂಡ್ ದು ದುಡ್ಡು ಕಟ್ಟಿ ಎಂದು ಕಳಿಸಿದ್ದಾರಾ.ಮೈತ್ರಿ ಸರ್ಕಾರ ಇದ್ದಾಗ ಕಾಂಗ್ರೆಸ್ ಕಚೇರಿಗೆ ಬಿಲ್ ಕಳಿಸಿದ್ರಾ?ಎರಡು ಲಕ್ಷ ಮೂರು ಲಕ್ಷ ಖರ್ಚು ಮಾಡೋ ಯೋಗ್ಯತೆ ಇಲ್ವಾ ನಂಗೆ.ಯಾವುದೋ ಬ್ಲೂ ಫಿಲ್ಮ್ ಟೆಂಟ್ ನಲ್ಲಿ ತೋರಿಸಿಕೊಂಡು ಬಂದಿಲ್ಲ.ರೌಡಿಗಳಿಗೆ ಎಣ್ಣೆ ಸಪ್ಲೈ ಮಾಡಿಕೊಂಡು ಬಂದಿದ್ದಾನಾ?ಅಂತಾ ಕುಮಾರಸ್ವಾಮಿ ಪ್ರಶ್ನೆ ಮೇಲೆ ಪ್ರಶ್ನೆ ಮಾಡಿದ್ದಾರೆ.
 
ಅಲ್ಲದೇ ಮೊನ್ನೆ ಹೇಳಿದ್ದೀನಿ ಮೂವತ್ತು ಕೋಟಿ ಕೇಳ್ತಾರೆ.ದಂಧೆ ಮಾಡ್ತಿದ್ದಾರೆ.ಚುನಾವಣೆ ಬಂದಾಗ ಹಲವರು ಬಂದು ಸಹಾಯ ಮಾಡ್ತಾರೆ.ವೆಸ್ಟ್ ಎಂಡ್ ಎಲ್ಲಿಗೆ ಹೋಗಬೇಕು ಎಂದು ಇವರ ಬಳಿ ಹೇಳಿಸಿಕೊಳ್ಳಬೇಕಾ? ಎಂದು ಹೆಚ್ ಡಿಕೆ ವಾಗ್ದಾಳಿ ನಡೆಸಿದ್ದಾರೆ. ನೆರೆ ಪರಿಹಾರ ಹಣದಲ್ಲಿ ಮಜಾ ಮಾಡಿದವರು ನೀವು.ಸಮಯ ಬರಲಿ.ದಿನೇಶ್ ಗುಂಡೂರಾವ್ ಮೈ ಕೈ ಪರಚಿಕೊಳ್ತಿದ್ದಾರೆ.ಅವ್ರು ಮೈಕೈ ಪರಚಿಕೊಳ್ಳೋದೋ ಬೇಡ ಅಧಿಕಾರ ಇದ್ದಾಗ ಇಲ್ಲದೇ ಇದ್ದಾಗಲೂ ಹಾಗೇ ಇದ್ದೇವೆ ಎಂದು ಮಾಜಿ ಹೆಚ್ ಡಿ ಕುಮಾರ್ ವಾಗ್ದಾಳಿ ನಡೆಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ