ಪೊಲೀಸರಂತೆ ನಟಿಸಿದ್ರು: ಚಿನ್ನಾಭರಣ ದೋಚಿದ್ರು

ಬುಧವಾರ, 30 ಜನವರಿ 2019 (18:53 IST)
ಮತ್ತೆ ಪೊಲೀಸರ ಹೆಸರು ಹೇಳಿಕೊಂಡು ಬಂದ ದುಷ್ಕರ್ಮಿಗಳಿಬ್ಬರು ವ್ಯಕ್ತಿಯೋರ್ವರ ಮೈಮೇಲಿದ್ದ ಚಿನ್ನದ ಆಭರಣಗಳನ್ನು ಕದ್ದು ಯಾಮಾರಿಸಿರುವ ಘಟನೆ ನಡೆದಿದೆ.

ವ್ಯಕ್ತಿಯೊಬ್ಬರ ಮೈಮೇಲಿದ್ದ ಚಿನ್ನದ ಆಭರಣಗಳನ್ನು  ಬಿಚ್ಚಿಸಿ ಕರ್ಚೀಪ್ ನಲ್ಲಿ ಕಟ್ಟಿಸಿ ವಂಚಿಸಿ ಪರಾರಿಯಾದ ಘಟನೆ ಬೆಂಗಳೂರಿನ ಜೆಎಸ್ ಎಸ್ ಆಸ್ಪತ್ರೆಯ ಬಳಿ ನಡೆದಿದೆ.

ನಂಜನಗೂಡು ನಿವಾಸಿ ಗೋಪಾಲ್(50) ಎಂಬವರು ಬೆಳಿಗ್ಗೆ ಜೆಎಸ್ ಎಸ್ ಆಸ್ಪತ್ರೆ ಬಳಿ ಇರುವ ಲ್ಯಾಬ್ ಗೆ ಬಂದಿದ್ದರು.  ಅದೇ ವೇಳೆ ಬೈಕಿನಲ್ಲಿ ಬಂದ ವ್ಯಕ್ತಿಗಳಿಬ್ಬರು ತಾವು ಪೊಲೀಸರು, ನಿಮ್ಮ ಮೈಮೇಲಿದ್ದ ಚಿನ್ನದ ಆಭರಣಗಳನ್ನು ಬಿಚ್ಚಿಕೊಡಿ. ಕರ್ಚೀಫ್ ನಲ್ಲಿ ಕಟ್ಟಿಕೊಡುತ್ತೇವೆ ಎಂದು ಹೇಳಿದ್ದಾರೆ. ಅವರು ಹೇಳಿದ್ದಕ್ಕೆ ಮರು ಪ್ರಶ್ನಿಸದೇ ಗೋಪಾಲ್ 20ಗ್ರಾಂ ತೂಕದ ಚಿನ್ನದ ಚೈನು ಮತ್ತು 15ಗ್ರಾಂ ತೂಕದ ಉಂಗುರವನ್ನು ಬಿಚ್ಚಿ ಕೊಟ್ಟಿದ್ದಾರೆ.

ದುಷ್ಕರ್ಮಿಗಳು ಅವರ ಕರ್ಚೀಪ್ ಮತ್ತೆ ಅವರಿಗೆ ಮರಳಿ ನೀಡದೆ ಎಗರಿಸಿ ಪರಾರಿಯಾಗಿದ್ದಾರೆ ಎನ್ನಲಾಗಿದೆ. ಕೂಡಲೇ ಕೆ.ಆರ್.ಪೊಲೀಸ್ ಠಾಣೆಯ ಪೊಲೀಸರಿಗೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ಇನ್ಸಪೆಕ್ಟರ್ ಪ್ರಕಾಶ್, ಸಬ್ ಇನ್ಸಪೆಕ್ಟರ್ ಸುನಿಲ್, ಸಿಬ್ಬಂದಿಗಳಾದ ಲಕ್ಷ್ಮಿನಾರಾಯಣ್ ಆಗಮಿಸಿ ಸುತ್ತಮುತ್ತಲ ಅಂಗಡಿಗಳಲ್ಲಿ ಅಳವಡಿಸಲಾಗಿರುವ ಸಿಸಿಟಿವಿ ಫುಟೇಜ್ ಗಳನ್ನು ಪರಿಶೀಲನೆ ನಡೆಸಿದ್ದಾರೆ.  


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ