ರಾಜ್ಯ ಆಳ್ತೀನಿ ಎಂಬ ಭಯದಿಂದ ನನ್ನನ್ನ ಮುಗಿಸಲು ಹೊರಟಿದ್ರು : ರೆಡ್ಡಿ

ಸೋಮವಾರ, 27 ಫೆಬ್ರವರಿ 2023 (08:47 IST)
ತುಮಕೂರು : ನಾನು ಖಂಡಿತವಾಗಿಯೂ ರಾಜ್ಯ ಆಳ್ತೀನಿ ಎಂಬ ಭಯ ಕೆಲವರಿಗೆ ಇತ್ತು. ಹಾಗಾಗಿ ಎಲ್ಲರೂ ಸೇರಿ ನನ್ನನ್ನ ಮುಗಿಸಲು ಮುಂದಾಗಿದ್ದರು ಎಂದು ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಸಂಸ್ಥಾಪಕ ಅಧ್ಯಕ್ಷ ಗಾಲಿ ಜನಾರ್ದನ ರೆಡ್ಡಿ ಹೇಳಿದ್ದಾರೆ.
 
ಪಾವಗಡ ಪಟ್ಟಣದಲ್ಲಿ ನಡೆದ ಪಕ್ಷದ ಸಮಾವೇಶವನ್ನುದ್ದೇಶಿಸಿ ಮಾತನಾಡಿದ ಅವರು, ನನ್ನನ್ನು ಮನೆಯಲ್ಲೇ ಕೂರಿಸಬೇಕು. ಇವನು ಹೊರಗಡೆ ಎಂದೂ ಬರಬಾರದು ಎಂದು ಕೆಲವರು ಪ್ರಯತ್ನಿಸಿದ್ದರು.

ನನ್ನನ್ನ ಹೇಗಾದರೂ ಮಾಡಿ ಮುಗಿಸಬೇಕು ಎಂದು ಎಲ್ಲರೂ ಪ್ರಯತ್ನಪಟ್ಟರು. ಆದರೆ ದೇವರಿಚ್ಛೆ ಬೇರೆಯೇ ಇತ್ತು. ಹಾಗಾಗಿ ನಾನು 12 ವರ್ಷಗಳ ಬಳಿಕ ನಿಮ್ಮ ಮುಂದೆ ಮತ್ತೆ ಬಂದಿದ್ದೇನೆ ಎಂದು ತಿಳಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ