ಮನೆ ಮಠ ಬಿಟ್ಟು ಪಕ್ಷ ಕಟ್ಟಿದ್ದಾರೆ : ಯತ್ನಾಳ್

ಭಾನುವಾರ, 26 ಫೆಬ್ರವರಿ 2023 (09:57 IST)
ಬೆಂಗಳೂರು : ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರನ್ನು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಕೊಂಡಾಡಿದ್ದಾರೆ.
 
ವಿಧಾನಸಭೆಯಲ್ಲಿ ಮಾತನಾಡಿದ ಯತ್ನಾಳ್, ಅಧ್ಯಕ್ಷರೇ ಮುಂದಿನ ಸಲ ಮಂತ್ರಿಗಳಾಗಿ ಆಗಿ ಅಂತೇಳಿದ್ದಾರೆ. ಆದರೆ ಅವರು ಸಿಎಂ ಆಗಿದ್ದಾಗ ನಿಮ್ಮನ್ನ ಮಂತ್ರಿ ಮಾಡಲಿಲ್ಲ, ನನ್ನನ್ನೂ ಮಂತ್ರಿ ಮಾಡಲಿಲ್ಲ. ನನ್ನ ಮಂತ್ರಿ ಮಾಡಿದ್ರೆ ಎಲ್ಲಿ ಸಿಎಂ ಆಗ್ಬಿಡ್ತಾನೋ ಅಂತಾ ಮಾಡಲಿಲ್ಲ. ನಿಮ್ಮನ್ನ ಕೇಂದ್ರ ಮಂತ್ರಿ ಮಾಡಿದ್ರು ಎಂದು ಹೇಳಿದರು.

ನನ್ನ ಶಿಕ್ಷಣ ಮಂತ್ರಿ ಮಾಡಿದ್ದು ಯಡಿಯೂರಪ್ಪ ಅವರೇ ಅಂತ ಸ್ಪೀಕರ್ ಕಾಗೇರಿ ಹೇಳಿದಾಗ ಯಡಿಯೂರಪ್ಪ ಪರ ಮಾತನಾಡಿದ ಯತ್ನಾಳ್, ಅದೇನೇ ಇರಲಿ, ಯಡಿಯೂರಪ್ಪ ಕಷ್ಟ ಕಾಲದಲ್ಲಿ ನಮ್ಮ ಜೊತೆಗೆ ನಿಂತಿದ್ದಾರೆ. ವಿಜಯಪುರಕ್ಕೆ ಬಸ್ಸಿನಲ್ಲಿ ಬರುತ್ತಿದ್ದರು.

ನಾನು ಬ್ಯಾಗ್ ಹಿಡಿದುಕೊಂಡು ಬರುತ್ತಿದ್ದೆ. ಶ್ರೀಕಾಂತ್ ಕುಲಕರ್ಣಿ ಪೇಪರ್ ಹಿಡಿದುಕೊಂಡು ಬರುತ್ತಿದ್ದ. ಇಬ್ಬರು ಆಟೋದಲ್ಲಿ ಯಡಿಯೂರಪ್ಪ ಅವರನ್ನ ಬಿಟ್ಟು ಬರುತ್ತಿದ್ದೆವು. ಮನೆ, ಮಠ ಬಿಟ್ಟು ಬಿಜೆಪಿ ಪಕ್ಷ ಕಟ್ಟಿದ್ದಾರೆ, ಅದನ್ನ ಮರೆಯಲ್ಲ ಅಂತ ಯತ್ನಾಳ್ ಹೇಳಿದರು. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ