ರೇಪ್ ಕೇಸ್ ನಲ್ಲಿ ಜೈಲಿಗೆ ಹೋಗಿ ಬಂದ ಮತ್ತದೇ ಕೆಲಸ ಮಾಡಿ ಸಿಕ್ಕಿಬಿದ್ದ

geetha

ಭಾನುವಾರ, 14 ಜನವರಿ 2024 (15:24 IST)
ಬೆಂಗಳೂರು-ಈ ಹಿಂದೆ ಅಪ್ರಾಪ್ತೆಯ ಮೇಲೆ ಅತ್ಯಾಚಾರವೆಸಗಿ ಜೈಲು ಸೇರಿದ್ದ ಯುವಕನೋರ್ವ ಜೈಲಿನಿಂದ ಬಿಡುಗಡೆಯಾಗಿ ಹೊರಬಂದ ಬಳಿಕ ಮತ್ತೆ ಅದೇ ಆರೋಪದ ಮೇಲೆ ಬಂಧಿತನಾಗಿದ್ದಾನೆ. 
 
ದೊಡ್ಡಬಳ್ಳಾಪುರದ ಬೆಳವಂಗಲ ನಿವಾಸಿ ಆನಂದ್‌ (24) ಬಂಧಿತ ಆರೋಪಿ.  ತ್ಯಾಮಗೊಂಡ್ಲುವಿನಿಂದ ಯಲಹಂಕಕ್ಕೆ ಬರುತ್ತಿದ್ದ ಶಾಲಾ ಬಾಲಕಿಯೋರ್ವಳನ್ನು ಈತ ಪುಸಲಾಯಿಸಿ ಯಲಹಂಕದಲ್ಲಿ ರೂಮ್‌ ಒಂದರಲ್ಲಿ ಇರಿಸಿ ಸತತವಾಗಿ ಅತ್ಯಾಚಾರವೆಸಗಿದ್ದಾನೆ. ವಿದ್ಯಾರ್ಥಿನಿ ಕಾಣೆಯಾದ  ಬಗ್ಗೆ ಆಕೆಯ ಪೋಷಕರು ದಾಬಸ್‌ ಪೇಟೆ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದರು. 
 
ಈ ಹಿಂದೆ ಬೆಂಗಳೂರು ನಗರದ ಬ್ಯಾಡರಹಳ್ಳಿ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಶಾಲಾ ವಿದ್ಯಾರ್ಥಿನಿಯ ಮೇಲೆ ಅತ್ಯಾಚಾರವೆಸಗಿದ ಪ್ರಕರಣದಲ್ಲಿ ಆನಂದ್‌ ಜೈಲು ಶಿಕ್ಷೆ ಅನುಭವಿಸಿ ಹೊರ ಬಂದಿದ್ದ.  ಆಗ ಅವನಿಗೆ ಕೇವಲ 19 ವರ್ಷ ವಯಸಾಗಿತ್ತು. ಈಗ ಮತ್ತೆ ಅದೇ ರೀತಿಯ ಪ್ರಕರಣದಲ್ಲಿ ಆನಂದ್‌ ಜೈಲು ಸೇರಿದ್ದಾನೆ.
 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ