ಹಲವು ದಿನಗಳಿಂದ ಭಾರಿ ಮಳೆ: ಫೀಲ್ಡ್ ಗಿಳಿದ ಮುಖ್ಯ ಆಯುಕ್ತ ಗೌರವ್ ಗುಪ್ತಾ ಅಧಿಕಾರಿಗಳಿಗೆ ವಾರ್ನಿಂಗ್

ಶನಿವಾರ, 9 ಅಕ್ಟೋಬರ್ 2021 (20:37 IST)
ಬೆಂಗಳೂರು: ಮಳೆಯ ಮಳೆ ಹೆಚ್ಚಾದ ಹಿನ್ನಲೆಯಲ್ಲಿ ಆಕ್ಟೀವ್ ಆದ ಬಿಬಿಎಂಪಿ ಮುಖ್ಯ ಆಯುಕ್ತ ಗೌರವ ಗುಪ್ತಾ ಸಿಲಿಕಾನ್ ಸಿಟಿಯಲ್ಲಿ ಮಳೆಯ ನಡುವೆ ಫೀಲ್ಡ್ ಗಿಳಿದಿದ್ದರು. ಮಳೆಯಿಂದ ತೊಂದರೆಯಾದ ಪ್ರದೇಶಗಳಿಗೆ ಖುದ್ದು ಭೇಟಿ ನೀಡಿ ಮಳೆನೀರು ಸರಾಗವಾಗಿ ಹರಿಯುವಂತೆ ಕ್ರಮ ತೆಗೆದುಕೊಳ್ಳಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. 
 
ದೊಮ್ಮಲೂರು ಮೇಲುಸೇತುವೆ, ಈಜೀಪುರದ ಕಡೆ ಹೋಗುವ ರಸ್ತೆಗೆ ಪಾಲಿಕೆ ಮುಖ್ಯ ಕಮಿಷನರ್ ದಿಢೀರ್ ಭೇಟಿ ನೀಡಿ. 3 ಕ್ರಾಸ್ ಕಲ್ವರ್ಟ್‌ಗಳಲ್ಲಿ ತುಂಬಿರುವ ಹೂಳನ್ನು ತೆರವುಗೊಳಿಸಿ ಎಂದು ಖಡಕ್ ಸಂದೇಶ ರವಾನಿಸಿದರು. ರೀಮಾಡೆಲಿಂಗ್ ಮಾಡಿ ಮಳೆ ನೀರು ಸರಾಗವಾಗಿ ಹರಿದು ಹೋಗುವಂತೆ ಮಾಡಲು ಆದೇಶಿಸಲಾಗಿದೆ. 
 
ಬಿಬಿಎಂಪಿ ವ್ಯಾಪ್ತಿಯ ದೊಮ್ಮಲೂರು ವ್ಯಾಪ್ತಿಯಲ್ಲಿ ವಿವಿಧ ಕಾಮಗಾರಿಗಳ ಪರಿಶೀಲನೆ ಮಾಡಿ ದೊಮ್ಮಲೂರು ವಾರ್ಡ್ ವ್ಯಾಪ್ತಿಯ ಸುತ್ತಮುತ್ತಲಿನ ಪ್ರದೇಶದ ರಸ್ತೆಗಳಲ್ಲಿ ಬಿದ್ದಿರುವ ಗುಂಡಿಗಳನ್ನು ವ್ಯವಸ್ಥಿತ ರೀತಿಯಲ್ಲಿ ಮುಚ್ಚುವಂತೆ ಗೌರವ ಗುಪ್ತಾ ಅಧಿಕಾರಿಗಳಿಗೆ ಸೂಚಿಸಲಾಗಿದೆ. 
 
ಬಿ ಅಲರ್ಟ್: 
 
ಪರಿಶೀಲನೆ ವೇಳೆ ಬೃಹತ್ ನೀರುಗಾಲುವೆ ವಿಭಾಗದ ಮುಖ್ಯ ಅಭಿಯಂತರ ಸುಗುಣ, ಯೋಜನಾ ವಿಭಾಗದ ಚೀಫ್ ಇಂಜಿನಿಯರ್ ಎಂ.
ಮಳೆ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ