ವೀರ ಮರಣ ಹೊಂದಿದ ಯೋಧ

ಭಾನುವಾರ, 26 ಮೇ 2019 (16:10 IST)
ರಾಜ್ಯದ ಯೋಧರೊಬ್ಬರು ವೀರ ಮರಣ ಹೊಂದಿದ್ದಾರೆ.

ಚಿಕಿತ್ಸೆ ಫಲಕಾರಿಯಾಗದೆ ವೀರಮರಣ ಹೊಂದಿದ್ದಾರೆ ಯೋಧಯೊಬ್ಬರು. ಶಿವಲಿಂರೇಶ್ವರ ವೀರಭದ್ರಗೌಡ ಪಾಟೀಲ ಮೃತ ಯೋಧರಾಗಿದ್ದಾರೆ.

ಹಾವೇರಿ ಜಿಲ್ಲೆಯ ಬ್ಯಾಡಗಿ ತಾಲ್ಲೂಕಿನ ಗುಂಡೆನಹಳ್ಳಿ ಗ್ರಾಮದ ಹೆಮ್ಮೆಯ ಪುತ್ರ ಪಾಟೀಲ್.

ಜಮ್ಮು ಕಾಶ್ಮೀರದ ಪುಲ್ವಾಮಾದಲ್ಲಿ ನಡೆದ ಸರ್ಚ್ ಆಪರೇಶನ್ ನಲ್ಲಿ ಗಾಯಗೊಂಡಿದ್ದ ಶಿವಲಿಂಗೇಶ್ವರ ಕಳೆದ ಒಂದು ವಾರದಿಂದ ದೆಹಲಿಯ ಆರ್ ಆರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ ವೀರ ಯೋಧ.

ಸ್ವ ಗ್ರಾಮಕ್ಕೆ ಪಾರ್ಥಿವ ಶರೀರ ಬರುವ ಸಾಧ್ಯತೆ ಇದ್ದು, ಕುಟುಂಬಸ್ಥರಲ್ಲಿ ಮುಗಿಲು ಮುಟ್ಟಿದೆ ಆಕ್ರಂದನ.



ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ