ಕೊರೊನಾ ಓಡಿಸಲು ಹೋಮ ಮಾಡಿದ ಸಚಿವ
ಮಹಾಮಾರಿ ಕೊರೊನಾ ನಿರ್ಮೂಲನೆಗಾಗಿ ಪ್ರಾರ್ಥಿಸಿ ರಾಜ್ಯದ ಸಚಿವರೊಬ್ಬರು ಹೋಮ ಮಾಡಿದ್ದಾರೆ.
ಕೊರೊನಾ ಸೇರಿದಂತೆ ಯಾವುದೇ ಬಗೆಯ ಪೀಡೆಗಳು, ಜ್ವರಗಳು, ದೇಹಭಾದೆಗಳು ಕಾಡದಂತೆ ಆರೋಗ್ಯ ಕರುಣಿಸುವಂತೆ ಲೋಕಕಲ್ಯಾಣಾರ್ಥವಾಗಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು.
ಹೋಮ ಹವನವನ್ನು ನಡೆಸಿ ಪೂರ್ಣಾಹುತಿ ಸಲ್ಲಿಸಿ ಧನ್ವಂತರಿ ಹಾಗೂ ಪ್ರಕೃತಿಮಾತೆಗೆ ಪ್ರಾರ್ಥನೆ ಸಲ್ಲಿಸಲಾಯಿತು.