ಬೆಂಗಳೂರಲ್ಲಿ ಹುಡುಗರೂ ಸೇಫ್ ಅಲ್ಲ..?

ಗುರುವಾರ, 4 ಮೇ 2017 (10:49 IST)
ಬೆಂಗಳೂರಲ್ಲಿ ಲೈಂಗಿಕ ದೌರ್ಜನ್ಯ ಪ್ರಕರಣಗಳು ಹೆಚ್ಚಾಗುತ್ತಿವೆ. ಇತ್ತೀಚೆಗೆ ಕ್ಯಾಬ್ ಡ್ರೈವರ್ ಒಬ್ಬ ಲೈಂಗಿಕ ದೌರ್ಜನ್ಯ ನಡೆಸಿದ ಪ್ರಕರಣ ನಡೆದು 2 ದಿನಗಳಾಗುವಷ್ಟರಲ್ಲಿ ಮತ್ತೊಂದು ಆಘಾತಕಾರಿ ಸುದ್ದಿ ಬಂದಿದೆ.

ಕಲಾಸಿಪಾಳ್ಯ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದ ಮುರಳಿ ಎಂಬುವವನ ಕೊಲೆ ಪ್ರಕರಣದಲ್ಲಿ ಸಲಿಂಗ ಕಾಮಿಗಳ ಕೈವಾಡವಿರುವ ಶಂಕೆ ಇದೆ ಎಂದು ಮಾಧ್ಯಮಗಳು ವರದಿಮಾಡಿದೆ. ಕರಗದ ದಿನದಂದು ಮುರಳಿಯನ್ನ ಕರೆದೊಯ್ದ ಸಲಿಂಗಿಗಳ ಸಲಿಂಗಕಾಮ ನಡೆಸಿ ಬಳಿಕ ಹತ್ಯೆಗೈದಿದ್ದಾರೆ ಎನ್ನಲಾಗಿದೆ. ಮಾರುಕಟ್ಟೆಯ ಕಟ್ಟಡದ ಮೇಲೆ ಶವ ಸಿಕ್ಕಿದ್ದು, ಮರಣೋತ್ತರ ವರದಿ ಬಳಿಕವೇ ಸತ್ಯ ಹೊರಬೀಳಬೇಕಿದೆ.

ಫೇಸ್ಬುಕ್`ನಲ್ಲಿರುವ ಕೆಲ ನಕಲಿ ಅಕೌಂಟ್`ಗಳು ಸಲಿಂಗಕಾಮವನ್ನ ಪ್ರೋತ್ಸಾಹಿಸುತ್ತಿದ್ದು, ಯುವಕರನ್ನ ಫ್ರೆಂಡ್ ಮಾಡಿಕೊಂಡು ಬಳಿಕ ಅವರನ್ನ ಲೈಂಗಿಕವಾಗಿ ಬಳಸಿಕೊಳ್ಲುತ್ತಾರೆ ಎಂಬ ಗುಮಾನಿ ಇದೆ. ಸ್ಪುರದ್ರೂಪಿ ಪುರುಷರನ್ನ ಸೆಳೆಯುವ ಈ ತಂಡ 15 ದಿನಗಳಿಗೊಮ್ಮೆ ಗುಂಡಿನ ಪಾರ್ಟಿ ನಡೆಸಿ ಅಲ್ಲಿ ಸಲಿಂಗಕಾಮವೂ ನಡೆಸುತ್ತದೆ ಎಂದು ಹೇಲಲಾಗುತ್ತಿದೆ. ಇದುವರೆಗೆ 1000 ಯುವಕರ ಮೇಲೆ ದೌರ್ಜನ್ಯ ನಡೆದಿರುವ ಶಂಕೆ ಇದೆ ಎಂದು ಮಾಧ್ಯಮಗಳು ವರದಿ ಮಾಡಿವೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ