ವಿವಿಧ ಬೇಡಿಕೆ ಈಡೇರೆಕೆಗಾಗಿ ಧರಣಿ ಕುಳಿತ ಬಿಸಿ ಊಟ ಕಾರ್ಯಕರ್ತರು

ಮಂಗಳವಾರ, 3 ಆಗಸ್ಟ್ 2021 (18:54 IST)
ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕಿನ ಸರ್ಕಾರಿ ಶಾಲೆಯಲ್ಲಿ ಕಾರ್ಯ ನಿರ್ವಹಿಸುವ ಬಿಸಿ ಊಟ ಕಾರ್ಯಕರ್ತರು ತಮ್ಮ ಬೇಡಿಕೆಗಳು ಈಡೇರಿಸುವಂತೆ ಧರಣಿ ನಡಸಿದ್ರು. ತದನಂತರ ತಮ್ಮ ಮನವಿ ಪತ್ರವನ್ನ  ಕೂಡ್ಲಿಗಿ ತಹಶಿಲ್ದರ್ ಮೂಲಕ ಮಾನ್ಯ ಮುಖ್ಯಮಂತ್ರಿಗಳಿಗೆ ಈ ಬೇಡಿಕೆ ಯನ್ನ ತಲುಪಿಸುಬೇಕು ಎಂದು ತಹಶಿಲ್ದರ್ ಗೆ ಒತ್ತಾಯಿಸಿದ್ರು..ಇನ್ನು ಈ ಬಗ್ಗೆ ಹೋರಾಟಗಾರರು ಮಾತನಾಡಿ ಶಾಲೆಗಳಲ್ಲಿ ಎಸ್ ಡಿ.ಎಂ.ಸಿ ಯವರ ಕಿರುಕುಳ ಮಿತಿಮಿರಿದೆ ಅಲ್ಲದೆ ಜನಪ್ರತಿನಿದಿಗಳು ಕೂಡ ನಿಯಮ ಬಾಹಿರವಾಗಿ ಕೆಲಸಕ್ಕೆ  ನಿಯೋಜಿಸಿಕೊಳ್ಳಲಾಗುತ್ತಿದೆ ಎಂದು ದೂರಿದರು  ಈ ಬಗ್ಗೆ ಮನವಿ ಸ್ವಿಕರಸಿ ಮಾತನಾಡಿದ  ಶಿರೇಸ್ತಾದರರಾದ ಶ್ರೀಮತಿ ಅರುಂಧತಿ , ಸರ್ಕಾರಿ ಅದೇಶದ ನಿಯಮಗಳನ್ವಯ  ಕಾರ್ಯನಿರ್ವಹಿಸಬೇಕು ನಿಯಮ ಮಿರಿ ಒತ್ತಡ ಹೇರಿದ್ದಲ್ಲಿ ಅಂಥವರ ವಿರುಧ್ದ ಸೂಕ್ತ ಸಾಕ್ಷಿ ಅಧಾರಗಳ ಸಮೇತ ದೂರು ನೀಡಬಹುದಾಗಿದೆ ಎಂದು ಪ್ರತಿಭಟನಕಾರರಿಗೆ ಸಲಹೆ ನೀಡಿದ್ರು

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ