ದೇಗುಲದ ಮುಂದಿದ್ದ ಬೆಂಕಿಗೆ ಆಹುತಿಯಾಗಿದ್ದು ಹೇಗೆ ಗೊತ್ತಾ?

ಗುರುವಾರ, 22 ನವೆಂಬರ್ 2018 (18:36 IST)
ಪ್ರಖ್ಯಾತ ದೇವಸ್ಥಾನವೊಂದರ ಮುಂದೆ ನಿಂತಿದ್ದ ಕಾರ್ ಏಕಾಏಕಿಯಾಗಿ ಬೆಂಕಿ ಹೊತ್ತಿ ಉರಿದ ಘಟನೆ ನಡೆದಿದೆ.
ಕಲಬುರಗಿಯ ಗಾಣಗಾಪುರ ದತ್ತನ ಗುಡಿ ಮುಂದೆ ಘಟನೆ ನಡೆದಿದೆ.

ಗಾಣಗಾಪುರದ ಪ್ರಖ್ಯಾತ ದತ್ತನ ದೇವಸ್ಥಾನದ ಮುಂಭಾಗದಲ್ಲಿ ಕಾರ್ ಗಳನ್ನು ನಿಲ್ಲಿಲಾಗಿತ್ತು. ದೇವಸ್ಥಾನಕ್ಕೆ ಬಂದಿದ್ದ ಭಕ್ತರ ಕಾರು ಬೆಂಕಿಗಾಹುತಿಯಾಗಿದೆ.

ಕಸಕ್ಕೆ ಹಾಕಿದ್ದ ಬೆಂಕಿಯ ಕಿಡಿ ಕಾರಿಗೆ ತಗುಲಿದೆ. ಹೀಗಾಗಿ ಬೆಂಕಿಯ ಕಿಡಿಯಿಂದ ಕಾರು ಹೊತ್ತು ಉರಿದಿದೆ. ಕಾರಿನಲ್ಲಿದ್ದ ಭಕ್ತರು ದೇಗುಲಕ್ಕೆ ತೆರಳಿದ ಹಿನ್ನಲೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಈ ಕುರಿತು ಗಾಣಗಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.



ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ