ತಂದೆಗೆ ಚೂರಿ ಇರಿತ ಸುದ್ದಿ ಕೇಳಿಯೂ ಲೋಕಾಯುಕ್ತ ವಿಶ್ವನಾಥ್ ಪುತ್ರ ಮಾಡಿದ ಕೆಲಸವೇನು ಗೊತ್ತಾ?!

ಗುರುವಾರ, 8 ಮಾರ್ಚ್ 2018 (09:17 IST)
ಬೆಂಗಳೂರು: ರಾಜಧಾನಿಯ ಲೋಕಾಯುಕ್ತರ ಕಚೇರಿಯಲ್ಲೇ ತಮ್ಮ ತಂದೆಗೆ ಚೂರಿಯಿಂದ ದುಷ್ಕರ್ಮಿಯೊಬ್ಬ ಇರಿದಿದ್ದಾನೆ ಎಂಬ ಸುದ್ದಿ ಕೇಳಿಯೂ ಲೋಕಾಯುಕ್ತ ನ್ಯಾ. ವಿಶ್ವನಾಥ್ ಶೆಟ್ಟಿ ಪುತ್ರ ಡಾ. ರವಿಶಂಕರ್ ತಮ್ಮ ಕರ್ತವ್ಯ ನಿಭಾಯಿಸಿ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ವೃತ್ತಿಯಲ್ಲಿ ವೈದ್ಯರಾಗಿರುವ ಡಾ. ರವಿಶಂಕರ್ ನಗರದ ಎಂಎಸ್ ರಾಮಯ್ಯ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ತಂದೆಗೆ ಚಾಕು ಇರಿತದ ಸುದ್ದಿ ಬರುವಾಗ ಡಾ.ರವಿಶಂಕರ್ ತಮ್ಮ ರೋಗಿಯೊಬ್ಬರಿಗೆ ಶಸ್ತ್ರಚಿಕಿತ್ಸೆ ನಡೆಸುತ್ತಿದ್ದರಂತೆ.

ಈ ವೇಳೆ ತಮ್ಮ ರೋಗಿಯನ್ನು, ತಾವು ಮಾಡುತ್ತಿದ್ದ ಶಸ್ತ್ರಚಿಕಿತ್ಸೆಯನ್ನು ಅರ್ಧಕ್ಕೇ ಕೈ ಬಿಡದೇ ಪೂರ್ತಿಗೊಳಿಸಿದ ನಂತರವೇ ಅವರು ತಂದೆಯ ಬಳಿಗೆ ತೆರಳಿದರು ಎನ್ನಲಾಗಿದೆ. ನ್ಯಾ. ವಿಶ್ವನಾಥ್ ಮಲ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ