ಮೂರು ದಿನದ ಹಿಂದೆ ಸರಿ ಇದ್ದ ಮಗು ದಿಢೀರನೆ ಸತ್ತಿದ್ದು ಹೇಗೆ…?

ಸೋಮವಾರ, 25 ಡಿಸೆಂಬರ್ 2017 (08:18 IST)
ಬೆಂಗಳೂರು: ಬೆಂಗಳೂರಿನ ವಾಣಿ ವಿಲಾಸ ಆಸ್ಪತ್ರೆಯಲ್ಲಿ ಮೂರು ದಿನಗಳ ಹಿಂದೆ ಆರೋಗ್ಯವಾಗಿದ್ದ ನವಜಾತ ಶಿಶುವೊಂದು ದಿಢೀರನೆ ಸಾವನ್ನಪ್ಪಿದ ಘಟನೆ ನಡೆದಿದೆ.


ಮೂರು ದಿನಗಳ ಹಿಂದೆ ಅನೀತಾ ಎಂಬುವವರು ವಾಣಿ ವಿಲಾಸ ಆಸ್ಪತ್ರೆಯಲ್ಲಿ ಮಗುವಿಗೆ ಜನ್ಮ ನೀಡಿದ್ದರು. ನಿನ್ನೆ ಮಧ್ಯಾಹ್ನದವರೆಗೆ ಮಗು ಆರೋಗ್ಯವಾಗಿದೆ ಎಂದ ವೈದ್ಯರು, ಸಂಜೆಯ ಹೊತ್ತಿಗೆ ಮಗು ಸಾವನಪ್ಪಿದ ಬಗ್ಗೆ ತಿಳಿಸಿದಾಗ ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.


‘ಹಾಲುಣಿಸಿದಾಗ ಮಗುವಿನ ಎದೆ ಸವರಬೇಕು. ಮಗುವಿಗೆ ಹಾಲುಣಿಸಿ ಸರಿಯಾಗಿ ನೋಡಿಕೊಳ್ಳದ ಕಾರಣ ಸಾವನಪ್ಪಿರಬೇಕು. ಕೆಲವೊಮ್ಮೆ ಉಸಿರಾಟದ ತೊಂದರೆಯಾಗಿ ಸಾವನಪ್ಪುವ ಸಾಧ್ಯತೆ ಇದೆ. ಮಗುವಿನ ವೈದ್ಯಕೀಯ ವರದಿ ಬಂದ ನಂತರ ಕಾರಣ ತಿಳಿಯಲಿದೆ’ ಎಂದು ವಾಣಿ ವಿಲಾಸ ಆಸ್ಪತ್ರೆಯ ವೈದ್ಯಾಧಿಕಾರಿ ರವೀಂದ್ರನಾಥ್ ಮೇಟಿ ಹೇಳಿಕೆ ನೀಡಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ