ಸುದ್ದಿಗಾರರೊಂದಿಗೆ ಮಾತನಾಡಿದ ಎಂ.ಕೆ.ಗಣಪತಿ ಪತ್ನಿ ಪಾವನಾ, ನನ್ನ ಪತಿಯ ಸಾವಿನ ಸುದ್ದಿ ನನಗೆ ನಂಬಲು ಸಾಧ್ಯವಾಗಲಿಲ್ಲ. ಅವರ ಸಾವಿನ ಸುದ್ದಿ ತಿಳಿಯುತ್ತಲೆ ಮಂಗಳೂರಿನಿಂದ ಮಡಿಕೇರಿಯತ್ತ ಹೊರಟೆವು. ನಮ್ಮನ್ನು ಯಾವ ಅಧಿಕಾರಿಗಳು ಮಾತನಾಡಿಸಲಿಲ್ಲ. ನನ್ನ ಹೇಳಿಕೆಯನ್ನು ಪಡೆದುಕೊಂಡರು. ಆದರೆ, ಇದೀಗ ನನ್ನ ಹೇಳಿಕೆಗಳೇ ಮಾಯವಾಗಿದೆ ಎಂದು ಆರೋಪಿಸಿದ್ದಾರೆ.
ನನ್ನ ಹೇಳಿಕೆಗಳನ್ನು ಪೊಲೀಸರೊಬ್ಬರು ದಾಖಲಿಸಿಕೊಳ್ಳುತ್ತಿದ್ದರು. ಆದರೆ, ಅವರ ಯಾರು ಎಂದು ಮರೆತು ಹೋಗಿದ್ದೇನೆ. ನನ್ನ ಸಂಸಾರದಲ್ಲಿ ಯಾವುದೇ ತೊಂದರೆಗಳಿರಲಿಲ್ಲ. ಅತ್ತೆ, ಮಾವನವರೊಂದಿಗೆ ಚೆನ್ನಾಗೆ ಇದ್ದೇವು. ನನ್ನ ಪತಿ ನನ್ನ ಬಳಿ ಎಲ್ಲ ವಿಷಯವನ್ನು ಹೇಳಿಕೊಳ್ಳುತ್ತಿದ್ದರು ಎಂದು ತಿಳಿಸಿದ್ದಾರೆ.