ಹೆಂಡತಿಯ ಕತ್ತು ಕುಯ್ದ ಗಂಡ; ಕಾರಣವೇನು ಗೊತ್ತಾ?

ಸೋಮವಾರ, 29 ಜೂನ್ 2020 (09:19 IST)
ಬೆಂಗಳೂರು: ಗಂಡ-ಹೆಂಡತಿಯ ನಡುವೆ  ಕ್ಷುಲಕ ಕಾರಣಕ್ಕೆ  ಜಗಳ ನಡೆದು ಪತಿ ತನ್ನ ಪತ್ನಿಯ ಕತ್ತಿ ಕುಯ್ದ ಕೊಲೆ ಮಾಡಿದ ಘಟನೆ ಚಂದಾಪುರ ಹತ್ತಿರದ ಬನಹಳ್ಳಿಯಲ್ಲಿ ನಡೆದಿದೆ.

ಯೋಗಶ್ರೀ ಕೊಲೆಯಾದ ಮಹಿಳೆ, ಅರುಣ್ ಕೊಲೆ ಮಾಡಿದ ಆರೋಪಿ. ಕೆಲ ದಿನಗಳ ಹಿಂದಷ್ಟೇ ಚಂದಾಪುರದ ಬನಹಳ್ಳಿಯ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದ ಈ ದಂಪತಿ ತೋಟದ ಕೆಲಸಕ್ಕೆ ಹೋಗುತ್ತಿದ್ದರು. ಭಾನುವಾರ ಗಂಡ-ಹೆಂಡತಿಯ ನಡುವೆ ಜಗಳ ನಡೆದಿದ್ದು ಸಿಟ್ಟಿನಲ್ಲಿ ಗಂಡ ಹೆಂಡತಿಯ ಕತ್ತು ಕುಯ್ದಿದ್ದ. ಆರೋಪಿಯನ್ನು ಬಂಧಿಸಿದ್ದ ಸೂರ್ಯನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ