ಪತ್ನಿ ಜೊತೆ ತಡರಾತ್ರಿ ಹೊರ ಹೋದ ಗಂಡ ಹೆಣವಾದ

ಗುರುವಾರ, 25 ಜೂನ್ 2020 (17:00 IST)
ಪತ್ನಿಯ ಜೊತೆಗೆ ತಡರಾತ್ರಿ ಮನೆಮುಂದೆ ಹೋಗುತ್ತಿದ್ದ ಗಂಡನೊಬ್ಬ ವಿನಾಕಾರಣವಾಗಿ ಕೊಲೆಯಾಗಿದ್ದಾನೆ.

ಪತಿ ಊಟ ಮಾಡಿದ ಮೇಲೆ  ತನ್ನ ಪತ್ನಿಯೊಂದಿಗೆ ತಡರಾತ್ರಿ ಮನೆಯಿಂದ ಹೊರಗಡೆ ಹೋಗಿದ್ದಾನೆ.

ದಾರಿಯಲ್ಲಿ ಎದುರಾದ ದುಷ್ಕರ್ಮಿಗಳು ಪತ್ನಿಯ ಎದುರಲ್ಲೇ ಪತಿ ಮಿಥುನ್ ಮೇಲೆ ಬಿಯರ್ ಬಾಟಲ್ ಗಳಿಂದ ಹಲ್ಲೆ ನಡೆಸಿದ್ದು, ಚಿಕಿತ್ಸೆ ಫಲಕಾರಿಯಾಗದೇ ಮಿಥುನ್ ಸಾವನ್ನಪ್ಪಿದ್ದಾನೆ.

ಪಂಜಾಬ್ ನ ಪಟಿಯಾಲದಲ್ಲಿ ಘಟನೆ ನಡೆದಿದ್ದು, ಆರೋಪಿಗಳನ್ನು ಶಂಕರಪುರದ ಜಗನ್ಮೋಹನ್, ಕುರುಕ್ಷೇತ್ರ ಜಿಲ್ಲೆಯ ಭೂಪೆಂದರ್ ಎಂದು ಗುರುತಿಸಲಾಗಿದೆ.  ಕೊಲೆಗಾರರ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ