ವರದಕ್ಷಿಣೆ ದುರಾಸೆಗೆ ಪತ್ನಿಯ ಜೀವ ತೆಗೆದ ಪತಿ

ಗುರುವಾರ, 31 ಡಿಸೆಂಬರ್ 2020 (09:57 IST)
ಬೆಂಗಳೂರು: ವರದಕ್ಷಿಣೆ ತರಲಿಲ್ಲವೆಂದು ಪತ್ನಿಯನ್ನು ಪತಿ ಕತ್ತು ಹಿಸುಕಿ ಹತ್ಯೆ ಮಾಡಿದ ಘಟನೆ ಆರ್ ಟಿ ನಗರ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.


ಆಂಧ‍್ರ ಮೂಲದ ಸಲ್ಮಾ (20) ಮೃತ ದುರ್ದೈವಿ. ಈಕೆಯ ಪತಿ ಸೈಯರ್ ಮುಸ್ತಫಾ (25) ಈ ಕೃತ್ಯವೆಸಗಿದ್ದಾನೆ. ವೃತ್ತಿಯಲ್ಲಿ ಕಾರು ಚಾಲಕನಾಗಿದ್ದ ಆರೋಪಿ ಒಂದೂವರೆ ವರ್ಷದ ಹಿಂದೆ ಮದುವೆಯಾಗಿದ್ದ. ಇವರಿಗೆ ಒಂದು ಗಂಡು ಮಗುವೂ ಇದೆ. ಪದೇ ಪದೇ ಪತ್ನಿಯ ತವರು ಮನೆಯಿಂದ ನಗ-ನಗದು ತರುವಂತೆ ಕಿರುಕುಳ ನೀಡುತ್ತಿದ್ದ. ಈ ವಿಚಾರವೇ ತಾರಕಕ್ಕೇರಿ ಆರೋಪಿ ಪತ್ನಿಯ ಕತ್ತು ಹಿಸುಕಿದ್ದಾನೆ.  ಇದೀಗ ಸಂತ್ರಸ್ತೆಯ ಕುಟುಂಬಸ್ಥರ ದೂರಿನ ಮೇರೆಗೆ ಆರೋಪಿಯನ್ನು ಬಂಧಿಸಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ