ನಾನು ಪಕ್ಷಾಂತರ ಮಾಡಲ್ಲ: ಸಚಿವ ಪ್ರಮೋದ್ ಮಧ್ವರಾಜ್

ಮಂಗಳವಾರ, 17 ಅಕ್ಟೋಬರ್ 2017 (17:46 IST)
ಉಡುಪಿ: ನಾನು ಪಕ್ಷಾಂತರ ಮಾಡಲ್ಲ. ಅನಂತ್ ಕುಮಾರ್ ಭೇಟಿಯಾಗಲೆಂದು ಐಬಿಗೆ ಹೋಗಿಲ್ಲ ಎಂದು ಸಚಿವ ಪ್ರಮೋದ್ ಮಧ್ವರಾಜ್ ಸ್ಪಷ್ಟನೆ ನೀಡಿದ್ದಾರೆ.

ಅನಂತ್ ಭೇಟಿಗೆಂದು ಐಬಿಗೆ ಹೋಗಿರಲಿಲ್ಲ. ನಾನು ಭೇಟಿ ನೀಡಿದ್ದ ಸಂದರ್ಭದಲ್ಲಿ ಅನಂತ್ ಕುಮಾರ್ ಅಲ್ಲಿದ್ದರು. ಕೇಂದ್ರ ಸಚಿವರನ್ನು ಮಾತಾಡಿಸುವುದು ನಮ್ಮ ಕರ್ತವ್ಯ. ನಾವಿಬ್ಬರೇ ಕೂತು ಮಾತನಾಡಿಲ್ಲ. ಹಲವು ಮಂದಿ ಇದ್ದರು. ಸೌಜನ್ಯಕ್ಕಾಗಿ ಅವರ ಜೊತೆ ಕುಶಲೋಪರಿ ನಡೆಸಿದ್ದೆ. ಇದಕ್ಕೆ ಬೇರೆ ಅರ್ಥ ಕಲ್ಪಿಸುವುದು ಬೇಡ ಎಂದು ಹೇಳಿದರು.

ಕೆಲ ಮಾಧ್ಯಮಗಳು ಸ್ಪಷ್ಟೀಕರಣ ನೀಡಿದರೂ ಅಪಪ್ರಚಾರ ಮಾಡುತ್ತಿವೆ. ನಾನು ಅಮಿತ್ ಷಾರನ್ನು ಈವರೆಗೂ ನೋಡಿಲ್ಲ. ಅವರ ಭೇಟಿ ವಿಚಾರ ಸಹ ಸುಳ್ಳು ಎಂದು ಸ್ಪಷ್ಟೀಕರಣ ನೀಡಿದ್ದಾರೆ.

ಇತ್ತೀಚೆಗೆ ಕೇಂದ್ರ ಸಚಿವ ಅನಂತ್ ಕುಮಾರ್ ಜತೆಗಿದ್ದ ಸಚಿವ ಪ್ರಮೋದ್ ಮಧ್ವರಾಜ್‌ ಫೋಟೊ ವೈರಲ್ ಆಗಿತ್ತು. ಹೀಗಾಗಿ ಅವರು ಬಿಜೆಪಿ ಸೇರುತ್ತಾರೆ ಅನ್ನೋ ಮಾತುಗಳು ಕೇಳಿಬಂದಿತ್ತು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ