ದ್ವೇಷವಿದ್ದಿದ್ದರೆ ಶ್ರೀನಿವಾಸ್ ಪ್ರಸಾದ್‌ರನ್ನು ಸಚಿವರಾಗಿ ಮಾಡ್ತಿರಲಿಲ್ಲ: ಸಿದ್ದರಾಮಯ್ಯ

ಭಾನುವಾರ, 23 ಅಕ್ಟೋಬರ್ 2016 (15:19 IST)
ದ್ವೇಷವಿದ್ದಿದ್ದರೆ ಶ್ರೀನಿವಾಸ್ ಪ್ರಸಾದ್‌ರನ್ನು ಸಚಿವರಾಗಿ ಮಾಡ್ತಿರಲಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
 
ಪ್ರಸಾದ್ ನನ್ನ ವಿರುದ್ಧ ಏಕವಚನ ಪ್ರಯೋಗಿಸಿದ್ದಾರೆ. ಸರಕಾರದ ವಿರುದ್ಧ ಹಲವಾರು ಆರೋಪಗಳನ್ನು ಮಾಡಿದ್ದಾರೆ. ಆದರೆ ನಾನು ಅವರನ್ನು ಏಕವಚನದಲ್ಲಿ ಕರೆಯಲಾರೆ. ಅವರ ಹಿರಿಯರಾಗಿದ್ದಾರೆ ಎಂದು ತಿರುಗೇಟು ನೀಡಿದ್ದಾರೆ.
 
ಸಚಿವ ಸಂಪುಟ ಪುನಾರಚನೆ ವೇಲೆ ಕರೆದಿದ್ದ ಮಂತ್ರಿ ಪರಿಷತ್ ಸಭೆಯಲ್ಲಿ ಕೆಲವು ಸಚಿವರನ್ನು ಕೈಬಿಡುವುದಾಗಿ ಸ್ಪಷ್ಟ ಪಡಿಸಿದ್ದೆ. ಇದೀಗ ಅವರು ನನ್ನನ್ನು ಕೇಳಿಯೇ ಇಲ್ಲ ಎಂದು ಹೇಳುತ್ತಿರುವುದು ಸರಿಯಲ್ಲ ಎಂದರು.
 
ಮಂತ್ರಿಯಿದ್ದಾಗ ನಾನು ವಾಚ್ ಕಟ್ಟಿರುವ ಬಗ್ಗೆ ಬಾಯಿ ಬಿಟ್ಟಿರಲಿಲ್ಲ. ಮಂತ್ರಿ ಸ್ಥಾನ ಹೋದ ಕೂಡಲೇ ನಾನು ವಾಚ್ ಕೈ ಕಟ್ಟಿರುವುದು ಅವರ ನೆನಪಿಗೆ ಹೇಗೆ ಬಂತು ಎಂದು ಪ್ರಶ್ನಿಸಿದರು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ 

ವೆಬ್ದುನಿಯಾವನ್ನು ಓದಿ