ಸಿದ್ದರಾಮಯ್ಯ ಬಿಜೆಪಿ ವಿರುದ್ಧ ಪ್ರಚಾರ ಮಾಡದಿದ್ದರೆ ಇವರು ಮಂತ್ರಿಯಾಗ್ತಾರಂತೆ

ಬುಧವಾರ, 27 ನವೆಂಬರ್ 2019 (19:50 IST)
ಮಾಜಿ ಸಿಎಂ ಸಿದ್ಧರಾಮಯ್ಯ ಸಮುದಾಯ ಒಡೆಯುವ ಕೆಲಸ ಮಾಡದೇ ಕುರುಬ ಸಮಾಜದ ನಾಯಕರ ಗೆಲುವಿಗೆ ಸಹಕಾರ ನೀಡಬೇಕೆಂದು ಬಿಜೆಪಿ ಎಂಎಲ್ ಸಿ ಕೋರಿರುವ ಘಟನೆ ನಡೆದಿದೆ.

ಮಂಡ್ಯದ ಕೆ.ಆರ್.ಪೇಟೆ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ನಾರಾಯಣಗೌಡ ಪರ ಪ್ರಚಾರ ನಡೆಸಿದ ನಂಜುಂಡಿ ವಿಶ್ವಕರ್ಮ ಮಾತನಾಡಿ, ಎಂಟಿಬಿ ನಾಗರಾಜು, ಭೈರತಿ ಬಸವರಾಜು, ಸೋಮಶೇಖರ್ ಮತ್ತು ಅಡಗೂರು
ವಿಶ್ವನಾಥ್ ಸಚಿವರಾಗಲು ಸಿದ್ದರಾಮಯ್ಯ ಆಶೀರ್ವದಿಸಿ ಪುಣ್ಯದ ಕೆಲಸ ಮಾಡಬೇಕು ಎಂದಿದ್ದಾರೆ.  

ಸಿದ್ಧರಾಮಯ್ಯ ಹಿಂದುಳಿದ ವರ್ಗಗಳ ವಿರೋಧಿಯಾಗಿದ್ದಾರೆ. ಸಿದ್ಧರಾಮಯ್ಯ ಬಿಜೆಪಿ ವಿರುದ್ಧ ಪ್ರಚಾರ ಮಾಡದಿದ್ದರೆ
ಕುರುಬ ಸಮುದಾಯದ ಎಂಟಿಬಿ ನಾಗರಾಜು, ಭೈರತಿ ಬಸವರಾಜು, ಎಸ್.ಟಿ.ಸೋಮಶೇಖರ್, ಹೆಚ್.ವಿಶ್ವನಾಥ್ ಅವರು ಯಡಿಯೂರಪ್ಪ ಅವರ ಸಚಿವ ಸಂಪುಟದಲ್ಲಿ ಪ್ರಭಾವಿ ಸಚಿವರಾಗುತ್ತಾರೆ ಅಂತ ಹೇಳಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ