ಚಿನ್ನದ ಉಂಗುರ ನೀಡಿ ಮತ ಕೇಳುತ್ತಿರೋ ಅಭ್ಯರ್ಥಿ ಯಾರು?

ಮಂಗಳವಾರ, 26 ನವೆಂಬರ್ 2019 (18:50 IST)
ಅನರ್ಹ ಶಾಸಕರ ವಿರುದ್ಧ ಕೆಂಡ ಕಾರುತ್ತಿರುವ ಕೈ ಪಡೆ ಇದೀಗ ಚುನಾವಣೆ ಆಯೋಗಕ್ಕೆ ದೂರು ನೀಡಿದೆ.

ಎಂಎಲ್ ಸಿ ಪ್ರಕಾಶ್ ರಾಠೋಡ್ ನೇತೃತ್ವದ ನಿಯೋಗವು ಅನರ್ಹ ಶಾಸಕರಾದ ಬಿಜೆಪಿಯ ಅಭ್ಯರ್ಥಿ ಎಂಟಿಬಿ ನಾಗರಾಜ್ ಹಾಗೂ ಆನಂದ ಸಿಂಗ್ ವಿರುದ್ಧ ಚುನಾವಣೆಯಲ್ಲಿ ಅಕ್ರಮ ಎಸಗಿರೋ ಕುರಿತು ಹಾಗೂ ನೀತಿ ಸಂಹಿತೆ ಉಲ್ಲಂಘನೆ ಮಾಡಿರೋ ಕುರಿತು ದೂರು ಸಲ್ಲಿಸಿದ್ದಾರೆ.

ಬೈ ಎಲೆಕ್ಷನ್ ಗೆಲ್ಲೋದಕ್ಕೆ ಎಂಟಿಬಿ ನಾಗರಾಜ್ ಚಿನ್ನದ ಉಂಗುರ ಮತದಾರರಿಗೆ ನೀಡುತ್ತಿದ್ದಾರೆ. ಮಗನ ಮದುವೆ ನೆಪದಲ್ಲಿ ಆನಂದ ಸಿಂಗ್ 50 ಸಾವಿರ ಜನರಿಗೆ ಊಟ, ತಿಂಡಿ ವೆಚ್ಚ ಭರಿಸಿ ಆತಿಥ್ಯ ನೆಪದಲ್ಲಿ ಗಿಫ್ಟ್ ಕೊಡಲಿದ್ದಾರೆ.

ಹೀಗಾಗಿ ಇಬ್ಬರ ಮೇಲೂ ಕ್ರಮ ಕೈಗೊಳ್ಳಬೇಕೆಂದು ಕೈ ಪಡೆ ಒತ್ತಾಯ ಮಾಡಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ