ಅಧಿಕಾರಕ್ಕೆ ಬರೋದಾದರೆ ಯಾವ ಜಯಂತಿ ಆದರೂ ಮಾಡಲಿ- ದೇವೇಗೌಡ

ಬುಧವಾರ, 14 ಫೆಬ್ರವರಿ 2018 (21:16 IST)

ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಅಧಿಕಾರಕ್ಕೆ ಬರೋದಾದರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಬಹುಮನಿ ಸುಲ್ತಾನ್ ಉತ್ಸವ ಆಚರಣೆ ಮಾಡಿಕೊಳ್ಳಲಿ ಎಂದು ಮಾಜಿ ಪ್ರಧಾನಮಂತ್ರಿ ಎಚ್.ಡಿ.ದೇವೇಗೌಡ ಹೇಳಿದ್ದಾರೆ.

ಹಾಸನದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮುಂದಿನ ಚುನಾವಣೆಯಲ್ಲೂ ಅಧಿಕಾರಕ್ಕೆ ಬರುವುದು ಸಿದ್ದರಾಮಯ್ಯ ಕನಸಾಗಿದ್ದರೆ ಯಾವುದೇ ಜಯಂತಿಯನ್ನು ಸಂತೋಷದಿಂದ ಆಚರಣೆ ಮಾಡಿಕೊಳ್ಳಲಿ ಎಂದಿದ್ದಾರೆ.

ನವ ಕರ್ನಾಟಕ, ಸಮೃದ್ಧ ಕರ್ನಾಟಕ ಹಾಗೂ ಹಸಿವು ಮುಕ್ತ ಕರ್ನಾಟಕ ನಿರ್ಮಾಣ ಮಾಡಲು ಜಯಂತಿಗಳು ನೆರವಾದರೆ ಯಾರ ಜಯಂತಿ ಬೇಕಾದರೂ ಆಚರಣೆ ಮಾಡಲಿಬಿಡಿ ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ