ಸ್ವದೇಸಿ ಶಾಪಿಂಗ್ ಮತ್ತು ಆಹಾರ ಮೇಳ” ಆಕ್ಟೊಬರ್ 5,6,7 ರಂದು

ಗುರುವಾರ, 4 ಅಕ್ಟೋಬರ್ 2018 (19:42 IST)
ಬೆಂಗಳೂರು: ಸ್ವದೇಸಿ ಬಗ್ಗೆ ಅಭಿಮಾನ ಮತ್ತು ಪ್ರೀತಿ ಹೊಂದಿರುವ ಪ್ರತಿಯೊಬ್ಬರಿಗು ವಾರಾಂತ್ಯದಲ್ಲಿ ಸ್ವದೇಶಿ ಶಾಪಿಂಗ್ ಮತ್ತು ಆಹಾರ ಮೇಳವನ್ನು ಆಯೋಜಿಸಲಾಗಿದೆ.
 ನಗರದ ಸ್ವದೇಸಿ ಪ್ರೀಯರಿಗೆಂದೆ ಬಾಬಾಡಾ ಧಾಭಾ ವತಿಯಿಂದ ವಿಶಿಷ್ಟವಾದ ಮೇಳವನ್ನು ಆಯೋಜಿಸಲಾಗಿದೆ. ಮೇಳದ ವಿಶೇಷ ಆಕರ್ಷಣೆಯಾಗಿ ಸಿರಿಧಾನ್ಯ ಕಲಾ ಪ್ರದರ್ಶನ, ಭಾರತೀಯ ಸಾಂಪ್ರದಾಯಿಕ ಉಡುಗೆಯ ಫ್ಯಾಶನ್ ಶೋ, ದಸರಾ ಗೊಂಬೆಗಳ ಪ್ರದರ್ಶನ, ಮ್ಯಾಜಿಕ್ ಶೋ ಹಾಗೂ ಸಂದೇಶ ಪೂಜಾರಿಯವರಿಂದ ಕಣ್ಣು ಕಟ್ಟಿಕೊಂಡು ಅಡುಗೆ ಮಾಡುವ ಪ್ರತಿಭಾ ಪ್ರದರ್ಶನ ನಡೆಯಲಿದೆ.
 
ಸ್ವದೇಸಿ ಶಾಪಿಂಗ್ ಮತ್ತು ಆಹಾರ ಮೇಳ” ಕ್ಕೆ ಯಲಹಂಕ ಶಾಸಕ ಶ್ರೀ.ಎಸ್.ಆರ್ ವಿಶ್ವನಾಥ ಚಾಲನೆ ನೀಡಲಿದ್ದಾರೆ. ವಿಶೇಷ ಆಹ್ವಾನಿತರಾಗಿ ಆರ್.ಎಸ್.ಎಸ್.ಎಸ್.ಎನ್ ಬ್ಯಾಂಕ್ ಅಧ್ಯಕ್ಷೆ ವಾಣಿಶ್ರೀ ವಿಶ್ವನಾಥ, ಯಲಹಾಂಕದ ಬಿಜೆಪಿ ಕಾರ್ಯದರ್ಶಿ ಡಾ. ಸತೀಶ್ ಕುಮಾರ, ಮಾಜಿ ಕಾರ್ಪೋರೆಟರ್ ನೇತ್ರಾ ಪಲ್ಲವಿ ಹಾಗೂ ಕಾರ್ಪೋರೇಟರ್ ಎಂ ಸತೀಶ್ ಆಗಮಿಸಲಿದ್ದಾರೆ.
 
ಯಲಹಂಕದ 5ನೇ ಹಂತದಲ್ಲಿರುವ ನಿಸರ್ಗ ಆಟದ ಮೈದಾನದಲ್ಲಿ ನಡೆಯುವ ಈ ಮೇಳದಲ್ಲಿ 100ಕ್ಕೂ ಹೆಚ್ಚು ಆಹಾರ ಮಳಿಗೆಗಳಿದ್ದು 500ಕ್ಕೂ ಹೆಚ್ಚು ತಿಂಡಿ ಮತ್ತು ತಿನಿಸುಗಳು ಮಕ್ಕಳ ಆಟ, ಗೃಹೋಪಯೋಗಿ ಪಿಠೋಪಕರಣಗಳು, ವಸ್ತ್ರಾಭರಣಗಳು ಹಾಗೂ ಲೈವ್ ಕುಕರಿ ಶೋ ನಡೆಯಲಿವೆ.
 
 ಮಾಧ್ಯಮ ಸಂಪರ್ಕ : ಅರವಿಂದ +91 8861474734

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ