ಮಂದಿರ ಉದ್ಘಾಟನೆ: ಪಾಲ್ಗೊಳ್ಳಲು ನಾಯಕರಿಗೆ ‘ಹೈ’ ಒಪ್ಪಿಗೆ

geetha

ಶನಿವಾರ, 6 ಜನವರಿ 2024 (16:00 IST)
ದೆಹಲಿ-ಅಯೋಧ್ಯೆ ರಾಮಮಂದಿ ರದ ಉದ್ಘಾಟನೆಯಲ್ಲಿ ಪಾಲ್ಗೊಳ್ಳಬಹುದೇ, ಇಲ್ಲವೇ ಎನ್ನುವ ಕಾಂಗ್ರೆಸ್ ನಾಯಕರ ಗೊಂದಲಗಳಿಗೆ ಹೈಕಮಾಂಡ್ ತೆರೆ ಎಳೆದಿದ್ದು, ಸಮಾರಂಭದಲ್ಲಿ ಪಾಲ್ಗೊಳ್ಳುವ ಆಸಕ್ತಿ ಉಳ್ಳವರು ಭಾಗವಹಿಸಬಹುದೆಂದು ಸಮ್ಮತಿ ನೀಡಿದೆ.

ದಿಲ್ಲಿಯಲ್ಲಿ ನಡೆದ ರಾಜ್ಯ ಘಟಕಗಳ ನಾಯಕರ ಸಭೆ ವೇಳೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಪಕ್ಷದ ನಾಯಕರಿಗೆ ಯಾವುದೇ ಕಟ್ಟುಪಾ ಡುಗಳಿಲ್ಲ. ಮಂದಿರದಲ್ಲಿ ಪ್ರಾರ್ಥನೆ ಸಲ್ಲಿ ಸಲು ಬಯಸುವ ಯಾರಾದರೂ ಹೋಗ ಬಹುದು ಎಂದು ಹೇಳಿದ್ದಾರೆಂದು ಮೂಲ ಗಳು ತಿಳಿಸಿವೆ. ಉತ್ತರ ಪ್ರದೇಶ ಹಾಗೂ ಬಿಹಾರದಲ್ಲಿರುವ ಕಾಂಗ್ರೆಸ್ ನಾಯಕರು ತಾವು ಸಮಾರಂಭದಲ್ಲಿ ಭಾಗಿಯಾಗಬೇಕೆ ಎಂಬುದರ ಬಗ್ಗೆ ಸ್ಪಷ್ಟನೆ ನೀಡುವಂತೆ ಪಕ್ಷವನ್ನು ಕೋರಿದ್ದ ಬೆನ್ನಲ್ಲೇ ಈ ಬೆಳವಣಿಗೆ ವರದಿಯಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ