ಡಿಸಿಎಂ ರದ್ದುಪಡಿಸಲು ಬಿಜೆಪಿಯಲ್ಲಿ ತೀವ್ರಗೊಂಡ ಜಗಳ

ಬುಧವಾರ, 1 ಜನವರಿ 2020 (14:42 IST)
ಡಿಸಿಎಂ ಹುದ್ದೆಗಳನ್ನು ರದ್ದು ಪಡಿಸೋ ಕುರಿತು ಪರ ಹಾಗೂ ವಿರೋಧ ಟೀಕೆಗಳು, ಆರೋಪಗಳಲ್ಲಿ ಬಿಜೆಪಿ ಮುಖಂಡರೇ ಮುಳುಗಿರೋದು ಹೊಸ ಬೆಳವಣಿಗೆಗೆ ಕಾರಣವಾಗಿದೆ.

ಸಚಿವಸ್ಥಾನ ವಂಚಿತ ಶಾಸಕ ಎಂ.ಪಿ.ರೇಣುಕಾಚಾರ್ಯ ಅವರು ಡಿಸಿಎಂ ರದ್ದು ಬಗ್ಗೆ ಮಾತನಾಡಿರೋದಕ್ಕೆ ಪ್ರತಿಕ್ರಿಯೆ ನೀಡಲು ಡಿಸಿಎಂ ಹಿಂದೇಟು ಹಾಕಿದ್ದಾರೆ.

ಡಿಸಿಎಂ ಲಕ್ಷ್ಮಣ ಸವದಿ ಮೌನಕ್ಕೆ ಶರಣಾಗಿದ್ದು, ಡಿಸಿಎಂ ರದ್ದು ಮಾಡುವಂತೆ ನಡೆಯುತ್ತಿರುವ ಸಹಿ ಸಂಗ್ರಹ ಅಭಿಯಾನದ ಬಗ್ಗೆ ತಮಗೆ ಮಾಹಿತಿ ಇಲ್ಲ ಅಂತ ಹೇಳಿದ್ದಾರೆ.

ಪಕ್ಷದಲ್ಲಿ ಕುಳಿತು ಪ್ರಮುಖರೊಂದಿಗೆ ಚರ್ಚೆ ನಡೆಸಲಾಗುತ್ತದೆ ಅಂತ ಡಿಸಿಎಂ ಹೇಳಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ