ಶಿರೂರಿನಲ್ಲಿ ಲಾರಿ ಚಾಲಕನ ಪತ್ತೆ ಕಾರ್ಯಕ್ಕೆ ಕೈಜೋಡಿಸಿದ ಈಶ್ವರ್ ಮಲ್ಪೆ

Sampriya

ಶನಿವಾರ, 27 ಜುಲೈ 2024 (20:24 IST)
Photo Courtesy X
ಕಾರವಾರ: ಭೂ ಕುಸಿತದಿಂದ ಲಾರಿ ಸಮೇತ ಚಾಲಕ ಅರ್ಜುನ್ ಸೇರಿದಂತೆ ಮೂವರು ನಾಪತ್ತೆಯಾಗಿ ಇಂದಿಗೆ 11 ದಿವಸವಾಗಿದ್ದು, ಇದೀಗ ಇವರ ಪತ್ತೆ ಕಾರ್ಯಚರಣೆಗೆ ಮಲ್ಪೆ ಈಶ್ವರ್ ತಂಡ ಶಿರೂರಿಗೆ ಆಗಮಿಸಿದೆ.

ಈಗಾಗಲೇ ನಾಪತ್ತೆಯಾಗಿ ಹನ್ನೊಂದು ದಿನಗಳು ಕಳೆದಿದ್ದು ಅವರಿಗಾಗಿ ಇನ್ನೂ ಹುಡುಕಾಟ ಮುಂದುವರೆದಿದೆ. ಅದರಂತೆ ಇಂದು ಮಲ್ಪೆ ಈಶ್ವರ್ ತಂಡ ಶಿರೂರಿಗೆ ಬಂದಿದ್ದು ನಾಪತ್ತೆಯಾದ ಕಾರ್ಯಾಚರಣೆ ನಡೆಸಲಿದ್ದಾರೆ ಎನ್ನಲಾಗಿದೆ.

ಪತ್ತೆ ಕಾರ್ಯಚರಣೆಗೆ ನೆರವಾಗುವಂತೆ ಉತ್ತರಕನ್ನಡ ಎಸ್ಪಿ, ಡಿಎಸ್ಪಿ  ಅವರು ಮಲ್ಪೆ ಈಶ್ವರ್ ಅವರಿಗೆ ಕರೆ ಮಾಡಿದ್ದಾರೆ. ಆದರೆ ಇದು ತುಂಬಾನೇ ಸವಾಲಿನಿ ಕೆಲಸ ಎಂದು ಈಶ್ವರ ಮಲ್ಪೆ ಹೇಳಿದ್ದಾರೆ.  

ಈಗಾಗಲೇ ಸ್ಥಳದಲ್ಲಿ ಸೇನಾ ಪಡೆ, ಎನ್.ಡಿ.ಆರ್.ಎಫ್.‌ ತಂಡ ಕಾರ್ಯಾಚರಣೆ ನಡೆಸಿದ್ದು ಅವರ ಮಾರ್ಗದರ್ಶನ ಪಡೆದು ನಾವು ಕಾರ್ಯಾಚರಣೆ ನಡೆಸುತ್ತೇವೆ  ಎಂದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ