‘ಐಟಿ ಇಲಾಖೆ ದೇವೇಗೌಡರ ಆಸ್ತಿ ತನಿಖೆ ಮಾಡಲಿ’

ಸೋಮವಾರ, 14 ಅಕ್ಟೋಬರ್ 2019 (16:20 IST)
ಜೆಡಿಎಸ್ ವರಿಷ್ಠ ಹಾಗೂ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರ ವಿರುದ್ಧ ಮಾಜಿ ಶಾಸಕರೊಬ್ಬರು ಹೊಸ ಬಾಂಬ್ ಸಿಡಿಸಿದ್ದಾರೆ.

ಲೋಕಸಭೆ ಚುನಾವಣೆಯಲ್ಲಿ ಸೋಲು ಕಂಡಿರುವ ಹೆಚ್.ಡಿ.ದೇವೇಗೌಡರು ಕೆಲಸ ಇಲ್ಲದೇ ಕುಳಿತು ಪತ್ರ ಬರೆಯುತ್ತಾರೆ. ಒಂದು ವೇಳೆ ನನ್ನ ಮೇಲೆ ಐಟಿ, ಇಡಿ ದಾಳಿಯಾದರೆ ಅದಕ್ಕೆ ಹೆಚ್.ಡಿ.ದೇವೇಗೌಡರೇ ಕಾರಣ ಅಂತ ಮಾಜಿ ಶಾಸಕರು ಆರೋಪ ಮಾಡಿದ್ದಾರೆ.

ನನ್ನ ವಿರುದ್ಧ ಐಟಿ ದಾಳಿ ನಡೆದಿದ್ದೇ ಆದಲ್ಲಿ ಹೆಚ್.ಡಿ.ದೇವೇಗೌಡರ ಆಸ್ತಿಯನ್ನು ಸಮಗ್ರವಾಗಿ ತನಿಖೆ ನಡೆಸಬೇಕು. ಅವರ ಕುಟುಂಬದ ಎಲ್ಲ ಸದಸ್ಯರ ಹೆಸರಿನಲ್ಲಿರೋ ಆಸ್ತಿಗಳನ್ನು ತನಿಖೆ ಮಾಡಿ ಸತ್ಯ ಹೊರಗೆ ತರಬೇಕು.

ಹೀಗಂತ ಪತ್ರ ಬರೆಯೋದಾಗಿ ಮಾಜಿ ಶಾಸಕ ಕೆ.ಎನ್.ರಾಜಣ್ಣ ಹೇಳಿದ್ದಾರೆ.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ