ತಡರಾತ್ರಿ ವಾಹನದಲ್ಲಿ ಅದನ್ನು ಮಾಡಿ ಸಿಕ್ಕಿಬಿದ್ದ!

ಭಾನುವಾರ, 5 ಮೇ 2019 (19:46 IST)
ತಡರಾತ್ರಿ ಐವರು ಸೇರಿ ವಾಹನವೊಂದರಲ್ಲಿ ಅಸಹ್ಯ ಕೆಲಸ ಮಾಡಿದ್ದಾರೆ.

ತಡರಾತ್ರಿ ಗ್ರಾಮದ ಕೊಟ್ಟಿಗೆಯಲ್ಲಿದ್ದ ಹಸುಕಳವು ಮಾಡಲು ಯತ್ನ ನಡೆಸಲಾಗಿದೆ. ಗ್ರಾಮಸ್ಥರ ಕೈಗೆ  ಸಿಕ್ಕಿ ಬಿದ್ದ ಓರ್ವ ಹಸುಗಳ್ಳನನ್ನು ಪೊಲೀಸರ ವಶಕ್ಕೆ ಒಪ್ಪಿಸಲಾಗಿದೆ.

ಬೊಲೆರೋ ವಾಹನದಲ್ಲಿ ಬಂದ ಐವರು ಹಸುಗಳ್ಳರಿಂದ ಕೃತ್ಯಕ್ಕೆ ಯತ್ನ ನಡೆದಿದೆ.

ನೆಲಮಂಗಲ ತಾಲ್ಲೂಕು ದಾಬಸ್ ಪೇಟೆ ಹಾಗೂ ಮಾಗಡಿ ತಾಲ್ಲೂಕಿನ ಗಡಿಯಲ್ಲಿರೋ ಕಕ್ಕೇಪಾಳ್ಯ ಗ್ರಾಮದಲ್ಲಿ ಘಟನೆ ನಡೆದಿದೆ.
ಹನುಮಂತರಾಯಪ್ಪ ಎಂಬುವರಿಗೆ ಸೇರಿದ 5 ಹಸುಗಳ ಕಳುವಿಗೆ ಯತ್ನಿಸಿದ್ದರು ಹಸುಗಳ್ಳರು. ಐವರು ಹಸುಗಳ್ಳರ ಪೈಕಿ, ಚಿತ್ರದುರ್ಗ ಮೂಲದ ಸಮೀರ್ ಎಂಬ ಓರ್ವ ಆರೋಪಿಯನ್ನು ದಾಬಸ್ಪೇಟೆ ಪೊಲೀಸರ ವಶಕ್ಕೆ ಒಪ್ಪಿಸಲಾಗಿದೆ.



ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ