ಜೆಡಿಎಸ್ ಈ ಬಾರಿ ಧೂಳಿಪಟ ಆಗುತ್ತಂತೆ!

ಮಂಗಳವಾರ, 12 ಮಾರ್ಚ್ 2019 (13:21 IST)
ಸಚಿವ ರೇವಣ್ಣ ಒಬ್ಬ ಮಹಿಳೆಯ ಬಗ್ಗೆ ಆ ರೀತಿ ಮಾತನಾಡಬಾರದು. ಮಂಡ್ಯದಲ್ಲಿ ಜೆಡಿಎಸ್ ಈ ಬಾರಿ ಧೂಳಿಪಟ ಆಗೋದು ಗ್ಯಾರಂಟಿ. ಹೀಗಂತ ಮಾಜಿ ಡಿಸಿಎಂ ಹೇಳಿದ್ದಾರೆ.

ಬೆಂಗಳೂರು ದಕ್ಷಿಣ ಮತ್ತು ಮಂಡ್ಯ ಕ್ಷೇತ್ರಗಳ ಬಗ್ಗೆ ಬಿ.ಎಸ್. ಯಡಿಯೂರಪ್ಪ ಜೊತೆ ಮಾತುಕತೆ ಮಾಡಲಾಗಿದೆ. ಮಂಡ್ಯದಲ್ಲಿ ಯಾರನ್ನು ನಿಲ್ಲಿಸಬೇಕು ಅನ್ನೋದು ಹೈಕಮಾಂಡ್ ತೀರ್ಮಾನ ಮಾಡುತ್ತದೆ. ಕಳೆದ ಬಾರಿ ಮಂಡ್ಯದಲ್ಲಿ ನಮಗೆ ಎರಡೂವರೆ ಲಕ್ಷ ಮತಗಳು ಬಂದಿದ್ದವು. ಈ ಬಾರಿ ಇನ್ನೂ ಒಂದು ಲಕ್ಷ ಮತಗಳು ಹೆಚ್ಚಾಗಿ ಬರೋ ಸಾಧ್ಯತೆ ಇದೆ. ಹಾಸನ ವಿಚಾರವಾಗಿ ಯಾರನ್ನು ಅಭ್ಯರ್ಥಿ ಮಾಡಬೇಕು ಅಂತ ನಡೆದ ಸಭೆಯಲ್ಲಿ ಪ್ರೀತಂ ಗೌಡ  ಬಂದಿದ್ದರು.

ಎಲ್ಲರೂ ಸೇರಿ ಯಡಿಯೂರಪ್ಪ ಜೊತೆ ಮಾತನಾಡಿದ್ದೇವೆ ಅಂತ ಮಾಜಿ ಡಿಸಿಎಂ ಆರ್.ಅಶೋಕ್ ಹೇಳಿದ್ದಾರೆ.  ರಾಜ್ಯದಲ್ಲಿ 22 ರಿಂದ 24 ಕ್ಷೇತ್ರಗಳನ್ನು ನಾವು ಗೆಲ್ಲುತ್ತೇವೆ ಎಂದ ಅವರು, ಕುಟುಂಬದ ರಾಜಕಾರಣದಿಂದ ಜನಕ್ಕೆ ಬೇಜಾರು ಆಗಿದೆ ಅಂತ ಡಾಲರ್ಸ್ ಕಾಲೋನಿ ಯಲ್ಲಿ ಯಡಿಯೂರಪ್ಪ ಭೇಟಿ ಬಳಿಕ  ಆರ್. ಅಶೋಕ್ ಹೇಳಿಕೆ ನೀಡಿದ್ದಾರೆ.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ