ಜೆಡಿಎಸ್ ತೊರೆದ ಹಿರಿಯ ಶಾಸಕ ಬಿಜೆಪಿಗೆ ಜಂಪ್ : ಹೆಚ್.ಡಿ.ಕೆಗೆ ಶಾಕ್

ಮಂಗಳವಾರ, 12 ನವೆಂಬರ್ 2019 (21:38 IST)

ರಾಜ್ಯದಲ್ಲಿ ರಾಜಕೀಯ ಉಪಚುನಾವಣೆ ಹೊಸ್ತಿಲಲ್ಲಿರುವಾಗಲೇ ಜೆಡಿಎಸ್ ಗೆ ಮತ್ತೊಬ್ಬ ಶಾಸಕ ಆಘಾತ ನೀಡಿದ್ದಾರೆ.
 

ಪಕ್ಷದ ಚಟುವಟಿಕೆಗಳಿಂದ ಸಂಬಂಧವೇ ಇಲ್ಲದಂತೆ ಕಂಡುಬರುತ್ತಿದ್ದ ಮಾಜಿ ಸಚಿವ ಜಿ.ಟಿ.ದೇವೇಗೌಡ ಇದೀಗ ಬಿಜೆಪಿ ಸೇರ್ಪಡೆಗೆ ಮುಂದಾಗಿದ್ದಾರೆ ಎನ್ನಲಾಗಿದೆ.

ತಮ್ಮ ಪುತ್ರನಿಗೆ ಹುಣಸೂರು ಉಪಚುನಾವಣೆ ಟಿಕೆಟ್ ನೀಡಿದರೆ ಜಿಟಿಡಿ ಜೆಡಿಎಸ್ ಗೆ ಕೈಕೊಡೋದು ಪಕ್ಕಾ ಆದಂತಿದೆ.

ಬೈ ಎಲೆಕ್ಷನ್ ನಲ್ಲಿ ಟಿಕೆಟ್ ನೀಡುವಂತೆ ಬಿಜೆಪಿ ನಾಯಕರಿಗೆ ಜಿಟಿಡಿ ಈಗಾಗಲೇ ಮನವಿ ಮಾಡಿದ್ದಾರೆ. ಆದರೆ ಕೇಸರಿ ಪಾಳೆಯದವರು ಟಿಕೆಟ್ ಕೊಡ್ತಾರಾ ಅಥವಾ ಕೈ ಕೊಡ್ತಾರಾ ಅನ್ನೋ ಚರ್ಚೆ ಜೋರಾಗಿಯೇ ನಡೆಯುತ್ತಿದೆ.

 

 

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ