ಪತ್ರಿಕೋದ್ಯಮದ ಪ್ರತಿಷ್ಠಿತ ಪ್ರಶಸ್ತಿ ಪ್ರಕಟ

ಸೋಮವಾರ, 15 ಮೇ 2017 (17:04 IST)
ಟಿಎಸ್‌ಆರ್ ಮತ್ತು ಮೊಹರೆ ಹಣಮಂತರಾಯ ಪ್ರಶಸ್ತಿ ಪ್ರಕಟವಾಗಿದ್ದು ಗಂಗಾಧರ್ ಹಿರೇಗುತ್ತಿ ಅವರಿಗೆ ಹಣಮಂತರಾಯ್ ಪ್ರಶಸ್ತಿ ಲಭಿಸಿದ್ದರೆ, ನಾಗೇಶ್ ಹೆಗ್ಡೆಯವರಿಗೆ ಟಿಯೆಸ್ಸಾರ್ ಪ್ರಶಸ್ತಿ ದೊರೆತಿದೆ.
 
ಮೊಹರೆ ಹಣಮಂತರಾಯ ಪ್ರಶಸ್ತಿ ಪಡೆದ ಗಂಗಾಧರ್ ಹಿರೇಗುತ್ತಿ, ಕಾರವಾರ ಉದಯ ಟಿವಿ ವರದಿಗಾರರಾಗಿದ್ದರೆ, 
ಟಿಯೆಸ್ಸಾರ್ ಪ್ರಶಸ್ತಿ ಪಡೆದ ನಾಗೇಶ್ ಹೆಗ್ಡೆ ಕರಾವಳಿ ಮುಂಜಾವು ಪತ್ರಿಕೆಯ ಸಂಪಾದಕರಾಗಿದ್ದಾರೆ.
 
ಪತ್ರಿಕೋದ್ಯಮಕ್ಕೆ ಸಲ್ಲಿಸಿದ ಸೇವೆಯನ್ನು ಪರಿಗಣಿಸಿ ಪ್ರಶಸ್ತಿ ನೀಡಲಾಗಿದೆ ಎಂದು ಪ್ರಶಸ್ತಿ ಆಯ್ಕೆ ಸಮಿತಿ ಮೂಲಗಳು ತಿಳಿಸಿವೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ವೆಬ್ದುನಿಯಾವನ್ನು ಓದಿ