ವೀರಭದ್ರಗೌಡ ಪಾಟೀಲ್​ಗೆ ನ್ಯಾಯಾಂಗ ಬಂಧನ

ಶನಿವಾರ, 23 ಏಪ್ರಿಲ್ 2022 (20:14 IST)
ವಿವಾದಿತ ಪೋಸ್ಟ್ ಮಾಡಿ ಹಳೇ ಹುಬ್ಬಳ್ಳಿ ಗಲಭೆಗೆ ಕಾರಣವಾದ ವೀರಭದ್ರಗೌಡ ಪಾಟೀಲನನ್ನ ಬಂಧಿಸಲಾಗಿದೆ. ವೀರಭದ್ರಗೌಡ ಪಾಟೀಲನನ್ನ ತಡರಾತ್ರಿ‌ ನ್ಯಾಯಾಧೀಶರ‌ ಮುಂದೆ ಹಾಜರುಪಡಿಸಿದ ಪೊಲೀಸರು 14 ದಿನಗಳ ನ್ಯಾಯಾಂಗ ಬಂಧನಕ್ಕೆ ಇರಿಸಲಾಗಿದೆ. ವೀರಭದ್ರಗೌಡ ಪಾಟೀಲ ಎಡಿಟ್ ಮಾಡಿ ಹಾಕಿದ್ದ ಪೋಸ್ಟ್ ಅನ್ನ ಅಭಿಷೇಕ ಸ್ಟೇಟಸ್ ಇಟ್ಟುಕೊಂಡಿದ್ದ. ಈ ಪೋಸ್ಟ್ ವಿವಾದಿತ ಎಂದು ತಿಳಿಯುತ್ತಿದಂತೆ ವೀರಭದ್ರಗೌಡ ಪಾಟೀಲ್ ಪೋಸ್ಟ್ ತೆಗೆದುಹಾಕಿದ್ದ. ಆದ್ರೆ ಅಭಿಷೇಕ್ ಹಿರೇಮಠ ಮಾತ್ರ ಪೋಸ್ಟ್ ತೆಗೆದಿರಲಿಲ್ಲ. ಅಭಿಷೇಕ್ ಹೇಳಿಕೆಯ ಆಧಾರದ ಮೇಲೆ ವೀರಭದ್ರಗೌಡನನ್ನ ವಶಕ್ಕೆ ಪಡೆದು ಗೌಪ್ಯ ಸ್ಥಳದಲ್ಲಿ ತೀವ್ರ ವಿಚಾರಣೆ ನಡೆಸಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ