ಬೆಂಗಳೂರು: ಧರ್ಮಸ್ಥಳದ ಬುರುಡೆ ರಹಸ್ಯ ಸಂಬಂಧ ಮುಂದಿನ ತನಿಖೆ ವಿಚಾರವಾಗಿ ಗೃಹ ಸಚಿವ ಜಿ ಪರಮೇಶ್ವರ್ ಅವರು ವಿಧಾನಸಭೆಯಲ್ಲಿ ಹೇಳಿಕೊಂಡಿದ್ದಾರೆ.
ಸರ್ಕಾರ ಈ ತನಿಖೆಯನ್ನು ಸಂಪೂರ್ಣವಾಗಿ ಎಸ್ಐಟಿ ನೀಡಿದ್ದು, ಸರ್ಕಾರ ಇದೀಗ ತನಿಖೆಗೆ ಅಡ್ಡಿ ಬರುವುದಿಲ್ಲ. ತನಿಖೆಯನ್ನು ಯಾವಾಗ ಮುಗಿಸಬೇಕೆಂಬುದನ್ನು ಎಸ್ಐಟಿಯೇ ನಿರ್ಧಾರ ಕೈಗೊಳ್ಳುತ್ತದೆ ಎಂದರು.
ವಿಪಕ್ಷಗಳು ಇನ್ನೇಷ್ಟು ದಿವಸ ತನಿಖೆ, ಯಾವಾಗ ಈ ತನಿಖೆ ಮುಗಿಯುತ್ತದೆ, ಯಾರಾದ್ದೂ ಒತ್ತಡಕ್ಕೆ ಮಣಿದು ಈ ತನಿಖೆ ನಡೆಸಲಾಗುತ್ತದೆ ಎಂಬ ಆರೋಪಕ್ಕೆ ಸುದೀರ್ಘವಾಗಿ ಪರಮೇಶ್ವರ್ ಅವರು ಪ್ರತಿಕ್ರಿಯಿಸಿದ್ದಾರೆ.
ತನಿಖೆ ನಡೆಯುತ್ತಿರುವ ಸಂದರ್ಭದಲ್ಲಿ ಏನೂ ಹೇಳುವುದಕ್ಕೂ ಹೇಳಕ್ಕಾಗಲ್ಲ. ಮಧ್ಯಂತರ ವರದಿ ಬಂದ್ಮೇಲೆ ಏನಾದ್ರೂ ಹೇಳಬಹುದು. ಆದರೆ ಈ ಸಂದರ್ಭದಲ್ಲಿ ಯಾವುದನ್ನೂ ಹೇಳಕ್ಕಾಗಲ್ಲ.
ತನಿಖೆಯನ್ನು ಆದಷ್ಟೂ ಬೇಗ ಮುಗಿಸಿ ಎಂದೂ ಹೇಳಬಹುದು ಬಿಟ್ಟು, ದಿನ ನಿಗದಿ ಮಾಡಿ ಈ ದಿವಸದಲ್ಲೇ ಮಗಿಸಿ ಎಂದು ಹೇಳಕ್ಕಾಗಲ್ಲ.
ಅಷ್ಟೂ ದೊಡ್ಡ ಸಂಸ್ಥೆ, ಪದ್ಮವಿಭೂಷಣ ಪ್ರಶಸ್ತಿ ಪಡೆದ ಡಾ. ಡಿ, ವಿರೇಂದ್ರ ಅಂತಹ ದೊಡ್ಡ ವ್ಯಕ್ತಿಯಾ ಮೇಲೆಯೇ ಗೂಬೆ ಕೂರಿಸುತ್ತಿರುವಾಗ ಸತ್ಯ ಆಚೆ ಬರಬೇಕಾಗುತ್ತದೆ. ಈ ತನಿಖೆಯಲ್ಲಿ ಮುಚ್ಚಿಡುದಂಹ ವಿಚಾರವಿಲ್ಲ. ಪಕ್ಷಾತೀತ ಉದ್ದೇಶದಲ್ಲಿ ಈ ತನಿಖೆಯನ್ನು ಎಸ್ಐಟಿಗೆ ಬಿಟ್ಟು ಕೊಟ್ಟಿದ್ದೇವೆ ಎಂದರು.