ಸಿದ್ದರಾಮಯ್ಯಗೆ ಬಹಿರಂಗವಾಗೇ ತಿವಿದ ಹೆಚ್.ಕೆ.ಪಾಟೀಲ್

ಮಂಗಳವಾರ, 21 ಜನವರಿ 2020 (14:25 IST)
ಕೆಪಿಸಿಸಿ ಅಧ್ಯಕ್ಷ ಸ್ಥಾನ ಹಾಗೂ ಕಾರ್ಯಾಧ್ಯಕ್ಷ ಹುದ್ದೆಗಳ ಬಗ್ಗೆ ಕೈ ಪಡೆಯಲ್ಲಿ ಬಹಿರಂಗವಾಗೇ ವಾಗ್ಯುದ್ದ ಶುರುವಾಗಿದೆ.


ಮಾಜಿ ಸಿಎಂ ಸಿದ್ದರಾಮಯ್ಯಗೆ ಬಹಿರಂಗವಾಗಿಯೇ ಮಾಜಿ ಸಚಿವ ಹೆಚ್.ಕೆ.ಪಾಟೀಲ್ ಟಾಂಗ್ ನೀಡಿದ್ದಾರೆ.

ಹೈಕಮಾಂಡ್ ಮುಂದೆ ನಾಲ್ವರು ಕಾರ್ಯಾಧ್ಯಕ್ಷರು ಬೇಕು ಅಂದಿರೋ ಸಿದ್ದರಾಮಯ್ಯರ ನಡೆಗೆ ಹೆಚ್.ಕೆ.ಪಾಟೀಲ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸಿಎಲ್ ಪಿ ಹಾಗೂ ವಿಪಕ್ಷ ನಾಯಕನ ಸ್ಥಾನಗಳು ಬೇರೆ ಬೇರೆ ಆಗಬೇಕು.

ಹೀಗಂತ ಒತ್ತಾಯ ಮಾಡೋ ಮೂಲಕ ಸಿದ್ದರಾಮಯ್ಯರ ಯೋಜನೆಗಳಿಗೆ ಟಾಂಗ್ ನೀಡಿದ್ದಾರೆ ಹೆಚ್.ಕೆ.ಪಾಟೀಲ್.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ