ಹೆಚ್.ಡಿ.ಕುಮಾರಸ್ವಾಮಿ ಸಿನಿಮಾ ಮಾಡಿಕೊಂಡಿರಲಿ ಎಂದ ಸಚಿವ

ಭಾನುವಾರ, 19 ಜನವರಿ 2020 (19:10 IST)
ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಸಿನಿಮಾ ಮಾಡಿಕೊಂಡಿರಲಿ ಸಾಕು. ಹೀಗಂತ ಬಿಜೆಪಿ ಹಿರಿಯ ಮುಖಂಡ ಹಾಗೂ ಸಚಿವರೊಬ್ಬರು ಕಿಡಿಕಾರಿದ್ದಾರೆ.

ಮಾಜಿ ಸಿಎಂ ಕುಮಾರಸ್ವಾಮಿ ವಿರುದ್ಧ ಸಚಿವ ಕೆ.ಎಸ್.ಈಶ್ವರಪ್ಪ ಕಿಡಿಕಾರಿದ್ದಾರೆ. ಸಿಎಂ ಸ್ಥಾನದಲ್ಲಿದ್ದವರು ಸ್ಥಾನಕ್ಕೆ ತಕ್ಕಂತೆ ನಡೆದುಕೊಳ್ಳಬೇಕೆಂದು ಟಾಂಗ್ ನೀಡಿದ್ದಾರೆ.

ರಾಜ್ಯದಲ್ಲಿ ಪೂರ್ಣ ಬಹುಮತ ಬರದ ಕಾರಣದಿಂದಾಗಿ ಒಂದಷ್ಟು ಗೊಂದಲ ಆಗಿದೆ. ವಿದೇಶ ಪ್ರವಾಸದ ಬಳಿಕ ಸಂಪುಟ ವಿಸ್ತರಣೆಗೆ ಸಿಎಂ ಯಡಿಯೂರಪ್ಪ ಮುಂದಾಗೋದು ಖಚಿತ ಅಂತ ಹೇಳಿದ್ದಾರೆ.

ರಾಜೀನಾಮೆ ನೀಡಿದವರಿಂದಲೇ ನಮ್ಮ ಸರಕಾರ ಬಂದಿದೆ. ಅವರ ಋಣ ತೀರಿಸೋದು ನಮ್ಮ ಕೆಲಸ. ಅದನ್ನು ಮಾಡೇ ಮಾಡುತ್ತೇವೆ ಅಂತ ಈಶ್ವರಪ್ಪನವರು ಸ್ವಪಕ್ಷದ ಮುಖಂಡರ ವಿರುದ್ಧವೇ ಗುಡುಗಿದ್ದಾರೆ.



ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ