ಸೈಬರ್ ಕ್ರೈಂ ಪೊಲೀಸರಿಗೆ ಕೈ ಮುಖಂಡರ ದೂರು

ಶುಕ್ರವಾರ, 6 ಅಕ್ಟೋಬರ್ 2023 (15:22 IST)
ಬಿಜೆಪಿಯಿಂದ ರಾಹುಲ್‌ಗಾಂಧಿ ಲೇವಡಿ ಹಿನ್ನೆಲೆ ರಾಜ್ಯ ಬಿಜೆಪಿ ನಾಯಕರ ವಿರುದ್ಧ ಕಾಂಗ್ರೆಸ್ ಬೆಂಗಳೂರು ನಗರ ಘಟಕದಿಂದ ದೂರು ದಾಖಲಿಸಲಾಗಿದೆ.ಸೈಬರ್ ಕ್ರೈಂ ಪೊಲೀಸರಿಗೆ ಮನೋಹರ್ ನೇತೃತ್ವದ ನಿಯೋಗದ ದೂರು ನೀಡಿದೆ.
 
ಬಿಜೆಪಿ ಅಧಿಕೃತ ಜಾಲತಾಣದಲ್ಲಿ ಲೇವಡಿ ಮಾಡಿದ್ದು,ರಾಹುಲ್ ಗಾಂಧಿಯವರನ್ನ ರಾವಣನಿಗೆ ಹೋಲಿಸಲಾಗಿದೆ.ಬಿಜೆಪಿ ಟ್ವೀಟ್ ಖಾತೆಯನ್ನ ಸ್ಥಗಿತಗೊಳಿಸಬೇಕು.ಅವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ಕೈ ಮುಖಂಡರು ಸೈಬರ್ ಕ್ರೈಂಗೆ ದೂರು ಸಲ್ಲಿಸಿ ಒತ್ತಾಯಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ