ಕನ್ನಡ ಸಾಹಿತ್ಯ ಸಮ್ಮೇಳನ : ತೊಗರಿ ನಾಡಿನ ಮಕ್ಕಳ ಸಂಭ್ರಮ ಜೋರು

ಭಾನುವಾರ, 26 ಜನವರಿ 2020 (19:29 IST)
ಕಲಬುರಗಿಯಲ್ಲಿ ನಡೆಯಲಿರೋ ಸಾಹಿತ್ಯ ಸಮ್ಮೇಳನಕ್ಕೆ ವಿಶೇಷವಾಗಿ ಆಹ್ವಾನ ನೀಡುತ್ತಾ ಪ್ರಚಾರ ನಡೆಸಲಾಗುತ್ತಿದೆ.

ಕಲಬುರಗಿಯ ಜೇವರ್ಗಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನಿಂದ ತೊಗರಿ ನಾಡು ಕಲಬುರಗಿಯಲ್ಲಿ ಫೆಬ್ರವರಿ 5, 6 ಮತ್ತು 7 ರಂದು ನಡೆಯುವ ನುಡಿ ಜಾತ್ರೆಗೆ ಬರಬೇಕು. ಹೀಗಂತ ಜೇವರ್ಗಿ ನಗರದ ಜೆ.ಟಿ.ವಿ.ಪಿ. ಶಾಲೆಯ ಮಕ್ಕಳು ಹಾಗೂ ಶಿಕ್ಷಕರು ಕನ್ನಡ ಸಾಹಿತ್ಯ ಪರಿಷತ್ತಿನ ಪದಾಧಿಕಾರಿಗಳು ಮತ್ತು ಕನ್ನಡಪರ ಸಂಘಟನೆಗಳೊಂದಿಗೆ ಸೇರಿ ಪ್ರಭಾತ ಫೇರಿ ಏರ್ಪಡಿಸುವುದರ ಮೂಲಕ ಎಲ್ಲರ ಗಮನ ಸೆಳೆದರು.

ಕ್ಷೇತ್ರ ಶಿಕ್ಷಣಾಧಿಕಾರಿ ಶಾಂತಪ್ಪ ಹುಲಕಲ್ ಹಾಗೂ ತಾಲೂಕಿನ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಶಿವಣ್ಣಗೌಡ ಪಾಟೀಲ್ ಹಂಗರಗಿ ಅವರು ಪ್ರಭಾತ ಫೇರಿಗೆ  ಚಾಲನೆ ನೀಡಿದರು. ತಹಶೀಲ್ದಾರ ಸಿದ್ದರಾಯ ಭಾಸಗಿ  ಅವರು  ವಾಹನಗಳಿಗೆ ಸಮ್ಮೇಳನದ ಸ್ಟೀಕರ್ ಹಚ್ಚುವ ಮೂಲಕ ಪ್ರಚಾರ ಕಾರ್ಯಕ್ಕೆ ಚಾಲನೆ ನೀಡಿದ್ರು.

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ