Karnataka Budget 2025 live: ಬಜೆಟ್ ನಲ್ಲೂ ಕೇಂದ್ರದ ವಿರುದ್ಧ ಸಿಎಂ ಸಿದ್ದರಾಮಯ್ಯ ಟೀಕಾಪ್ರಹಾರ, ಅನುದಾನ ಕೊಟ್ಟಿಲ್ಲ ಆರೋಪ
ಕೇಂದ್ರದ ವಿರುದ್ಧ ಈ ಮೊದಲಿನಿಂದಲೂ ಸಿಎಂ ಸಿದ್ದರಾಮಯ್ಯ ತೆರಿಗೆ ಹಂಚಿಕೆಯಲ್ಲಿ ಅನ್ಯಾಯ ಮಾಡಲಾಗುತ್ತಿದೆ ಎಂದು ಆರೋಪಿಸುತ್ತಲೇ ಬಂದಿದ್ದಾರೆ. ಇಂದು ಬಜೆಟ್ ಭಾಷಣದಲ್ಲೂ ಕೇಂದ್ರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಭದ್ರಾ ಮೇಲ್ಡಂಡೆ ಯೋಜನೆಗೆ ಅನುದಾನ ಘೋಷಣೆಯಾಗಿದ್ದರೂ ಬಿಡುಗಡೆ ಮಾಡಿಲ್ಲ. ತೆರಿಗೆ ಪಾಲು ಹಂಚಿಕೆಯಲ್ಲೂ ನಮಗೆ ಸಮಪಾಲು ನೀಡಿಲ್ಲ. 15 ನೇ ಹಣಕಾಸಿನ ಆಯೋಗದಲ್ಲಿ ತೆರಿಗೆ ಪಾಲು 4.731 ರಿಂದ 16 ನೇ ಹಣಕಾಸಿನ ಆಯೋಗದ ವೇಳೆ 3.647 ಕ್ಕೆ ಇಳಿಕೆಯಾಗಿದೆ.