ಮೂರು ಲಕ್ಷ ಹಣ ಎಗರಿಸಿದ ಕತರ್ನಾಕ್ ಕಳ್ಳರು

ಬುಧವಾರ, 24 ಆಗಸ್ಟ್ 2022 (20:17 IST)
ಹೊಸಕೋಟೆಯಲ್ಲಿ ಕಾರಿನ ಗ್ಲಾಸ್ ಹೊಡೆದು ಡ್ಯಾಶ್ ಬೋರ್ಡ್ ನಲ್ಲಿದ್ದ ಮೂರು ಲಕ್ಷ ಹಣವನ್ನ   ಕತರ್ನಾಕ್ ಕಳ್ಳರು ಎಗರಿಸಿದ್ದಾರೆ.ಹೊಸಕೋಟೆಯ ಓಲ್ಡ್ ಬಸ್ ಸ್ಟಾಂಡ್ ಬಳಿಯ ತಾಲೂಕು ಕಚೇರಿ ಮುಂಭಾಗದಲ್ಲಿ ಈ  ಘಟನೆ ನಡೆದಿದೆ.ಬೇಗೂರು ಮೂಲದ ಹರೀಶ್ ಎಂಬ ವ್ಯಕ್ತಿ  ಹಣ ಕಳೆದುಕೊಂಡಿದ್ದಾನೆ. ಕಾರ್ ನಿಲ್ಲಿಸಿ ಆಸ್ಪತ್ರೆಗೆ ಹೋಗಿ ಬರುವುದರೊಳಗೆ ಕಳ್ಳರ ತಮ್ಮ ಕೈಚಳಕ ತೋರಿದ್ದಾರೆ.ಇನ್ನು ಸ್ಥಳಕ್ಕೆ ಹೊಸಕೋಟೆ ಪೊಲೀಸರು ಭೇಟಿ  ನೀಡಿ ಪರಿಶೀಲನೆ ಕಾರ್ಯ ನಡೆಸುತ್ತಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ