ಕರ್ನಾಟಕ ಏಕೀಕರಣಕ್ಕೆ ಕೆಂಗಲ್ ಹನುಮಂತಯ್ಯ ಕೊಡುಗೆ ಇದೆ- ಸಿಎಂ

geetha

ಶನಿವಾರ, 10 ಫೆಬ್ರವರಿ 2024 (15:33 IST)
ಬೆಂಗಳೂರು-ಕೆಂಗಲ್ ಹನುಮಂತಯ್ಯ ಜನ್ಮ ದಿನ ಹಿನ್ನೆಲೆ ವಿಧಾನಸೌಧದ ಪಶ್ಚಿಮ ದ್ವಾರದ ಬಳಿ ಇರುವ ಕೆಂಗಲ್ ಹನುಮಂತಯ್ಯ ಪ್ರತಿಮೆಗೆ ಸಿಎಂ ಸಿದ್ದರಾಮಯ್ಯ ಮಾಲಾರ್ಪಣೆ ಮಾಡುದ್ದಾರೆ.ಮಾಲಾರ್ಪಣೆ ಬಳಿಕ ಸಿಎಂ‌ ಸಿದ್ದರಾಮಯ್ಯ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದಾರೆ.ಇಂದು ಕೆಂಗಲ್ ಹನುಮಂತ ಯ್ಯ ಜನ್ಮದಿನ ಈ ವಿಧಾನಸೌಧ ಕಟ್ಟಿಸಿದ್ದೇ ಅವರು ಆದರೆ ಅವರಿಗೆ ವಿಧಾನಸೌಧದಲ್ಲಿ ಆಡಳಿತ ನಡೆಸಲು ಆಗಲಿಲ್ಲ ಬಹಳ ದಕ್ಷತೆಯಿಂದ ರಾಜ್ಯವನ್ನು ನಡೆಸಿದವರು ಅವರು,ಸರ್ಕಾರದ ಕೆಲಸ ದೇವರ ಕೆಲಸ ಎಂದು ಬರೆಸಿದ್ರು.ಬದ್ದತೆಯಿಂದ ಕೆಲಸ ಮಾಡುತ್ತಿದ್ದರು.ಅವರಿಂದ ಕರ್ನಾಟಕದ ಏಕೀಕರಣಕ್ಕೆ ಬಹಳ ಕೊಡುಗೆ ಇದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ