ಅಪರಾಧ ಚಟುವಟಿಕೆಯಲ್ಲಿ ತೊಡಗುವವರಿಗೆ ಖಡಕ್ ವಾರ್ನಿಂಗ್!

ಗುರುವಾರ, 13 ಡಿಸೆಂಬರ್ 2018 (18:16 IST)
ಪದೇ ಪದೇ ಅಪರಾಧ ಚಟುವಟಿಕೆಯಲ್ಲಿ ಭಾಗಿಯಾಗುತ್ತಿರುವ ಎಂಓಬಿ ಗಳಿಗೆ ಖಡಕ್ ಎಚ್ಚರಿಕೆ ನೀಡುವ ಸಲುವಾಗಿ  ಪೊಲೀಸರು ಆರೋಪಿಗಳ ಪೆರೇಡ್ ನಡೆಸಿದ್ದಾರೆ.

ಬೆಂಗಳೂರು ಹೊರವಲಯದ ನೆಲಮಂಗಲ ಪಟ್ಟಣದ ಅಂಬೇಡ್ಕರ್ ಕ್ರೀಡಾಂಗಣದಲ್ಲಿ ರೌಡಿಗಳ ಪರೇಡ್ ನಡೆದಿದ್ದು, ಅಪರಾಧ ಚಟುವಟಿಕೆಗಳಲ್ಲಿ ಭಾಗಿಯಾಗುವವರಿಗೆ ಪೊಲೀಸ್ ಅಧಿಕಾರಿಗಳು ವಾರ್ನಿಂಗ್ ನೀಡಿದ್ದಾರೆ.  

ನೆಲಮಂಗಲ, ನೆಲಮಂಗಲ ಗ್ರಾಮಾಂತರ, ತ್ಯಾಮಗೊಂಡ್ಲು, ಡಾಬಸ್ ಪೇಟೆ, ಮಾದನಾಯಕನಹಳ್ಳಿ ಪೊಲೀಸ್ ಠಾಣೆಯ ಆರೋಪಿಗಳು ಪೆರೇಡ್ ನಲ್ಲಿ ಭಾಗಿಯಾಗಿದ್ದರು. ಪೊಲೀಸರು ದಾಖಲಾತಿಗಾಗಿ ಆರೋಪಿಗಳ ಹಾಜರಾತಿ ಪಡೆದು ಶಾಲಾ ವಿದ್ಯಾರ್ಥಿಗಳ ರೀತಿ ಕೈ ಎತ್ತಿಸಿ ಹಾಜರಾತಿ ಪಡೆದರು.

ಇನ್ನೂ ದರೋಡೆ, ಮನೆ ಕಳ್ಳತನ, ಕಬ್ಬಿಣ, ಮೊಬೈಲ್ ಕಳ್ಳತನದ ಜೊತೆಗೆ ಸರಗಳ್ಳತನ, ಬೈಕ್ ಕಳ್ಳತನ ಸೇರಿದಂತೆ ಇನ್ನಿತರ ಅಪರಾಧ ಚಟುವಟಿಕೆಯಲ್ಲಿ ಭಾಗಿಯಾಗುವ ಆರೋಪಿಗಳಿಗೆ ಕಾನೂನು ಪಾಠ ತಿಳಿಸುವ ಮೂಲಕ ಪೊಲೀಸರು ಎಚ್ಚರಿಕೆ ಸಂದೇಶವನ್ನು ನೀಡಿದ್ದಾರೆ.



ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ