ದಾವಣಗೆರೆಯಲ್ಲಿ 'ಖಾರ'ಜೋಳ

ಮಂಗಳವಾರ, 19 ಏಪ್ರಿಲ್ 2022 (21:01 IST)
ಸಂತೋಷ್ ಆತ್ಮಹತ್ಯೆ ಪ್ರಕರಣದ ಕುರಿತಂತೆ ದಾವಣಗೆರೆಯಲ್ಲಿ ಲೋಕೋಪಯೋಗಿ ಇಲಾಖೆ ಸಚಿವ ಗೋವಿಂದ ಕಾರಜೋಳ ಕೆಂಡಾಮಂಡಲರಾಗಿದ್ದಾರೆ. ಆತ್ಮಹತ್ಯೆ ಪ್ರಕರಣ ತನಿಖೆಯಲ್ಲಿದೆ. ಈ ಹಿನ್ನಲೆ ಹೆಚ್ಚು ಮಾತನಾಡಬಾರದು ಎಂದು ಸುಮ್ಮನೆ ಕೂತಿದ್ದೇನೆ. ಮಂಜೂರಾತಿ ಇಲ್ಲ, ಎಸ್ಟಿಮೇಟ್ ಇಲ್ಲ, ಟೆಂಡರ್ ಇಲ್ಲ, ವರ್ಕ್ ಆರ್ಡರ್ ಇಲ್ಲ. ಕೆಲಸ ಮಾಡಿದ್ದೇನೆ, ಬಿಲ್ ಕೊಡಿ ಎಂದರೆ ಕೊಡುವುದು ತುಂಬಾ ಕಷ್ಟದ ಕೆಲಸ. ಸರ್ಕಾರವನ್ನ ನಂಬಬೇಕಾದರೆ ಟೆಂಡರ್ ಪ್ರಕ್ರಿಯೆ ಮಾಡಬೇಕು. ತನಿಖೆ ಮುಗಿದ ಬಳಿಕ ಈ ಬಗ್ಗೆ ಮಾತಾನಾಡುತ್ತೇನೆ ಎಂದ್ರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ