ಬೈ ಎಲೆಕ್ಷನ್ ನಲ್ಲಿ ಬಿಜೆಪಿಗೆ ಶಾಕ್ ನೀಡಿದ ಕೆಜೆಪಿ

ಸೋಮವಾರ, 18 ನವೆಂಬರ್ 2019 (16:14 IST)
ಉಪಚುನಾವಣೆಯಲ್ಲಿ ಬಿಜೆಪಿಗೆ ಕೆಜೆಪಿ ಸೆಡ್ಡು ಹೊಡೆದಿದೆ.

ಬಿಜೆಪಿಗೆ ಸೆಡ್ಡು ಹೊಡೆದ ಕೆಜೆಪಿ ಪಕ್ಷದ  ಅಭ್ಯರ್ಥಿ ಅಥಣಿ ಮತಕ್ಷೇತ್ರದಿಂದ ಕಣಕ್ಕಿಳಿದಿದ್ದಾರೆ. ಕೆಜೆಪಿ ಅಭ್ಯರ್ಥಿಯಾಗಿ ವಿನಾಯಕ ಮಠಪತಿ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ.

ಪ್ರವಾಹ ಸಂತ್ರಸ್ತರಾಗಿರುವ ವಿನಾಯಕ ಮಠಪತಿ, ಕೆಜೆಪಿ ಅಭ್ಯರ್ಥಿಯಾಗಿ  ಐವತ್ತು ಸಾವಿರ ಮತಗಳಿಂದ ಗೆಲ್ಲುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ ಕೆಜೆಪಿ ರಾಜ್ಯಾಧ್ಯಕ್ಷ ಪದ್ಮನಾಭ ಪ್ರಸನ್ನಕುಮಾರ.

ಬಿಜೆಪಿ ಅಭ್ಯರ್ಥಿ ಮಹೇಶ ಕುಮಠಳ್ಳಿ ಸೋಲು ಖಚಿತ ಎಂದಿದ್ದಾರೆ ಕೆಜೆಪಿ ಅಧ್ಯಕ್ಷ.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ