ಮುಸ್ಲಿಂ ಯುವಕರ ಬಿಡುಗಡೆ ವಿರೋಧಿಸಿ ಕೆ.ಆರ್.ಪೇಟೆ ಬಂದ್ ಗೆ ಕರೆ

ಬುಧವಾರ, 30 ಅಕ್ಟೋಬರ್ 2019 (19:49 IST)
16 ಮುಸ್ಲಿಂ ಯುವಕರನ್ನು ಪೊಲೀಸರು ಬಿಡುಗಡೆ ಮಾಡಿರೋ ಕ್ರಮ ಖಂಡಿಸಿ ಅ.31 ರಂದು ಕೆ.ಆರ್.ಪೇಟೆ ಬಂದ್ ಗೆ ವಿವಿಧ ಸಂಘಟನೆಗಳು ಕರೆ ನೀಡಿವೆ.

ಕೆ.ಆರ್.ಪೇಟೆಯ ಆಲಂಬಾಡಿ ಕಾವಲು ಗ್ರಾಮದ ಹೊಲವೊಂದರಲ್ಲಿ ಪಿಎಫ್ ಐ ಸಂಘಟನೆ ಯುವಕರು ಕಾನೂನು ಬಾಹಿರ ಪರೇಡ್ ನಡೆಸಿದ್ರು. ಪೊಲೀಸರು ಯುವಕರನ್ನು ಬಂಧನ ಮಾಡಿದ್ದರೂ ಒಂದೇ ದಿನಕ್ಕೆ ಜೈಲಿನಿಂದ ಯುವಕರು ಹೊರಬಂದಿದ್ದಾರೆ.

ಇಂತಹ ಘಟನೆಗಳು ಮರುಕಳಿಸಬಾರದು ಅನ್ನೋ ಕಾರಣಕ್ಕೆ ಕನ್ನಡ ಪರ ಹಾಗೂ ಹಿಂದೂಪರ ಸಂಘಟನೆಗಳ ಕಾರ್ಯಕರ್ತರು ಬಂದ್ ಗೆ ಕರೆ ನೀಡಿದ್ದಾರೆ.

ಕೆ.ಆರ್.ಪೇಟೆಯಲ್ಲಿ ಪೊಲೀಸರು ಬಿಗಿ ಭದ್ರತೆ ಕೈಗೊಂಡಿದ್ದಾರೆ.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ