ಸುಭದ್ರ ಸರ್ಕಾರ ಕೊಡುವ ನಿಟ್ಟಿನಲ್ಲಿ ಶ್ರಮ ವಹಿಸ್ತೀವಿ- ಕೃಷ್ಣ ಬೈರೇಗೌಡ

ಭಾನುವಾರ, 14 ಮೇ 2023 (15:31 IST)
ಕಾಂಗ್ರೆಸ್ ಗೆ ಜನ ದೊಡ್ಡ ಮಟ್ಟದ ಆಶಿರ್ವಾದ ಮಾಡಿದ್ದಾರೆ ಎಂದು ಕೃಷ್ಣ ಭೈರೇಗೌಡ ಹೇಳಿದ್ದಾರೆ.1999 ರ ನಂತರ ಮೊದಲ ಬಾರಿಗೆ ಇಷ್ಟು ಬಹುಮತ ಬಂದಿದೆ.ಯಾವ ಪಕ್ಷಕ್ಕೂ ಕೊಟ್ಟಿರಲಿಲ್ಲ ಜನ.ಜನರಿಗೆ ನಾನು ಧನ್ಯವಾದ ಹೇಳ್ತೀನಿ.ಜನರ ನಂಬಿಕೆ ಉಳಿಸಿಕೊಳ್ಳುವ ಕೆಲಸ ಕಾಂಗ್ರೆಸ್ ದು,ಅತಂತ್ರ ರಾಜಕೀಯ ಪರಿಸ್ಥಿತಿ, ಭ್ರಷ್ಟ ಸರ್ಕಾರದ ವಿರುದ್ಧ ಸಿಡಿದೆದ್ದಿದ್ದಾರೆ.ನಮ್ಮ ಮೇಲೆ ಹೆಚ್ಚಿನ ಜವಬ್ದಾರಿ ಇದೆ.ಅಳಿ ತಪ್ಪಿರುವ ಆಡಳಿತವನ್ನು ಬಿಗಿ ಮಾಡಬೇಕಿದೆ.ಜನರ ನಂಬಿಕೆ ಉಳಿಸಿಕೊಳ್ಳುವ ಕೆಲಸ ಮಾಡ್ತೀವಿ.ನರೇಂದ್ರ ಮೋದಿಯವರ ಸೋಲು ಕೂಡ ಇದು.ಒಬ್ಬ ರಾಜ್ಯ ನಾಯಕರ ಹೆಸರಲ್ಲಿ ಚುನಾವಣೆ ಮಾಡಲಿಲ್ಲ.ನರೇಂದ್ರ ಮೋದಿಯವರ ಹೆಸರಿನಲ್ಲಿ ಚುನಾವಣೆ ಮಾಡಿದ್ರು.ಹೀಗಾಗಿ ಕಾಂಗ್ರೆಸ್ ನ ಗೆಲುವು ಇದು, ಮೋದಿಯವರ ಸೋಲು ಇದು.ಇದೊಂದು ದಿಕ್ಸೂಚಿಯಾಗಿದೆ ಎಂದು ಕೃಷ್ಣ ಭೈರೇಗೌಡ ಹೇಳಿದ್ರು.
 
 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ